ಕವಿತೆ
ಕವಿತೆ
ತರಹ ತರಹ ಭಾವ ಲಹರಿ..
ತಹತಹಿಕೆಯ ಬರಹದ ಸವಾರಿ..
ಸಣ್ಣ ವಿದಾಯದ ಸಿಹಿ ಬೇಸರವ ಮೀರಿ..
ಸವಿನೆನಪು ಗಳ ಸ್ವಪ್ನ ಗಳ ಜೊತೆ ಸಾಗುವ ತಯಾರಿ.
ಬದುಕ ಬಣ್ಣಗೊಳಿಸಲು ಕನಸು ನಿರೀಕ್ಷೆಗಳು..
ಈಡೇರದಿದ್ದರೆ ಹೆಗೆಲೇರುವ ಬೇಸರ ಹತಾಷೆಗಳು..
ಕಾವು ಮತ್ತು ತೇವ – ಸಮತೋಲನ ವೆ ಜೀವ..
ತರ್ಕಗಳು ಅರ್ಥವಾಗದು ಭಾವಕ್ಕೆ..
ಹರಿವ ತೊರೆಯ ತರಹ ಸಾಗುವ ಸುಮ್ಮನೆ..
ಕೊನೆಗೆ ಸೇರುವುದೆಲ್ಲೋ..
ಇದೆಯಲ್ಲ ವಿಧಿಬರಹ..
-ಬಸವರಾಜ್ ಜಿ ಎಸ್
basavakgl276@gmail.com

