ಹುಬ್ಬಳ್ಳಿ - ಧಾರವಾಡ
ರಾಜು ಪಾಟೀಲ್ ಅಂತಿಮ ದರ್ಶನ ಪಡೆದ ಸಿಎಂ; ಅಗಲಿದ ಸ್ನೇಹಿತನನ್ನು ನೆನೆದು ಕಣ್ಣೀರು

ಹುಬ್ಬಳ್ಳಿ: ಮುಖ್ಯಮಂತ್ರಿಯ ಸಂಬಂಧಿ ಹಾಗೂ ಆತ್ಮೀಯ ಸ್ನೇಹಿತರಾದ ರಾಜು ಪಾಟೀಲ್ ಹೃದಯಾಘಾತದಿಂದ ನಿಧನರಾಗಿದ್ದು, ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರು ಅಗಲಿದ ಸ್ನೇಹಿತನ ಅಂತಿಮ ದರ್ಶನ ಪಡೆದರು. ಈ ವೇಳೆ ಸಿಎಂ ಬೊಮ್ಮಾಯಿ ಸ್ನೇಹಿತನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಸ್ನೇಹಿತನ ಅಂತಿಮ ದರ್ಶನ ಬಳಿಕ ಸಿಎಂ ಹಾಗೂ ಕುಟುಂಬಸ್ಥರು ರಾಜು ಪಾಟೀಲ್ ಅವರ ಕುಟುಬಸ್ಥರಿಗೆ ಸಾಂತ್ವಾನ ಹೇಳಿದರು. ನಂತರ ಕುಟುಂಬದ ಸಂಬಂಧಿ ಹಾಗೂ ಸ್ನೇಹಿತರೊಂದಿಗೆ ರಾಜು ಪಾಟೀಲರವರ ಒಡನಾಟವನ್ನು ಸಿಎಂ ನೆನೆದರು.




