ಜಿಲ್ಲಾ ಸುದ್ದಿಬೆಳಗಾವಿ
ಶಾಸಕರ ಹುಟ್ಟು ಹಬ್ಬಕ್ಕೆ ಅಧಿಕಾರಿಗಳಿಂದ ಹೂಮಳೆ: ತಲೆ ತಗ್ಗಿಸಿದ ಪೊಲೀಸ್ ಇಲಾಖೆ

ಬೆಳಗಾವಿ: ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರ ಹುಟ್ಟು ಹಬ್ಬಕ್ಕೆ ಪೊಲೀಸ್ ಇಲಾಖೆಯೇ ಸೇವೆ ಮಾಡಿದೆ. ಮಹಾರಾಜರಂತೆ ಕೂಡಿಸಿ ಹೂವಿನ ಸುರಿಮಳೆ ಮಾಡಿದ್ದು ಜನ ಪ್ರಶ್ನಿಸುವಂತೆ ಮಾಡಿದೆ.
ಕಳೆದ ದಿನ ಕಿತ್ತೂರು ಶಾಸಕರ ಹುಟ್ಟು ಹಬ್ಬ ನಡೆದಿದ್ದು ಈ ವೇಳೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಜನ ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಿ ತದನಂತರ ಕುಳ್ಳಿಸಿ ಹೂ ಮಳೆ ಸುರಿದ್ದಾದ್ದರೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.




