Breaking NewsLatestಕಲಬುರ್ಗಿಜಿಲ್ಲಾ ಸುದ್ದಿಸ್ಪೆಷಲ್ ಸ್ಟೋರೀಸ್

ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಕಲ್ಯಾಣ ಕರ್ನಾಟಕ ಜನರ ಆಸೆಯಂತೆ ಯೋಜನೆ ಕೊಡ್ತಾರಾ ಪ್ರಧಾನಿ ಮೋದಿ

ಕಲಬುರಗಿ: ನಾಳೆ ಫೆ.01ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಮೇಲೆ ಕಲ್ಯಾಣ ಕರ್ನಾಟಕ ಭಾಗದ ಜನರ ನಿರೀಕ್ಷೆ ಹೆಚ್ಚಾಗಿದೆ. ಈ ಬಾರಿಯಾದರೂ ಕೇಂದ್ರ ಬಜೆಟ್ ‌ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ಸಿಗಬಹುದು ಎಂಬ ಬೆಟ್ಟದಷ್ಟು ನಿರೀಕ್ಷೆಯನ್ನು ಇಲ್ಲಿನ ಜನ ಹೊಂದಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಬಜೆಟ್ ಮಂಡನೆ ಮಾಡಲಿದ್ದಾರೆ. ಹೀಗಾಗಿ ಕೇಂದ್ರ ಬಜೆಟ್ ನತ್ತ ಎಲ್ಲರ ಚಿತ್ತ ನೆಟ್ಟಿದೆ. ಕಲ್ಯಾಣ ಕರ್ನಾಟಕ ಭಾಗದ ಜನರು ಸಹ ಕಾತುರದಿಂದ ಕಾಯುತ್ತಿದ್ದಾರೆ. ಈ ಭಾಗಕ್ಕೆ ರೈಲ್ವೆ ಡಿವಿಜನ್, ನ್ಯಾಷನಲ್ ಹೈವೇ ಸೇರಿದಂತೆ ಹಲವು ಯೋಜನೆಗಳು ರದ್ದಾಗಿದ್ದು, ಈ ಬಜೇಟ್ ನಲ್ಲಿ ಮರುಜೀವ ನೀಡುವ ಭರವಸೆಯಲ್ಲಿ ಜನರಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಿಂದ ಐದು ಜನ ಬಿಜೆಪಿ ಸಂಸದರಿದ್ದಾರೆ. ಇಷ್ಟಾದರು ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕ.ಕ ಭಾಗಕ್ಕೆ ಕಡೆಗಣಿಸುತ್ತಿದೆ ಎಂದು ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಅಸಮಾಧಾನ ವ್ಯಕ್ತ‌ಪಡಿಸಿದ್ದಾರೆ.

ಈ ಬಾರಿಯಾದರೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿ ಆಗಿರುವ ಅನ್ಯಾಯವನ್ನು ಸರಿಪಡಿಸುವ ನೀರಿಕ್ಷೆ ಇದ್ದು, ಪ್ರಮುಖವಾಗಿ ಬಹುದಿನಗಳ ಬೇಡಿಕೆಯಾಗಿರುವ ರೈಲ್ವೆ ಡಿವಿಷನ್, ಸೆಕೆಂಡ್ ರಿಂಗ್ ರೋಡ್, ನ್ಯಾಷನಲ್ ಹೈವೆ, ಎಮ್ಸ್, ನಿಮ್ಸ್ ಸ್ಥಾಪಿಸಬಹುದೆಂಬ ನೀರಿಕ್ಷೆ ಇದೆ. ಇದಲ್ಲದೆ ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವಂತಹ ಬೃಹತ್ ಕಾರ್ಖಾನೆ ನಿರ್ಮಾಣ ಮಾಡುವ ಮೂಲಕ ಕೇಂದ್ರ ಸರ್ಕಾರ ಹಿಂದುಳಿದ ಈ ಭಾಗಕ್ಕೆ ನ್ಯಾಯ ನೀಡಬಹುದು ಎಂದು ಅಂದಾಜಿಸಲಾಗಿದೆ.

ಉದ್ಯಮಿಗಳ ನೀರಿಕ್ಷೆ

ಬಜೆಟ್ ನಿರೀಕ್ಷೆ ಕುರಿತು ಪ್ರತಿಕ್ರಿಯೆ ನೀಡಿರುವ ಹೆಚ್‌ಕೆಸಿಸಿಐ ಪ್ರಮುಖರು, ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಾದರೂ ಕಲಬುರಗಿಯಲ್ಲಿ ಟೆಕ್ಸಟೈಲ್ ಪಾರ್ಕ್ ಘೋಷಣೆ ಮಾಡು ನೀರಿಕ್ವೆಯನ್ನು ಹೊಂದಿದ್ದಾರೆ. ಟೆಕ್ಸಟೈಲ್ ಪಾರ್ಕ್ಗಾಗಿ ರಾಜ್ಯ ಸರ್ಕಾರದಿಂದ ಮಂಜೂರಾತಿ ದೊರೆತಿದೆ. ಇದೀಗ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಟೆಕ್ಸಟೈಲ್ ಪಾರ್ಕ್ ಘೋಷಿಸಿದರೆ ಈ ಭಾಗದಲ್ಲಿ ಸುಮಾರು 50 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ. ಇನ್ನು ಕಲಬುರಗಿಯ ಇಎಸ್ಐಸಿ ಆಸ್ಪತ್ರೆಯನ್ನು ಏಮ್ಸ್ ಮೇಲ್ದರ್ಜೆಗೆ ಏರಿಸುವ ಮೂಲಕ ಆರೋಗ್ಯ ವಲಯ ಸಾಕಷ್ಟು ಅಭಿವೃದ್ಧಿ ಹೊಂದುವ ನೀರಿಕ್ಷೆ ಇದೆ. ನಿಮ್ಸ್ ಕೂಡ ಈ ಭಾಗಕ್ಕೆ ಅವಶ್ಯಕತೆವಾಗಿದೆ. ನಿಮ್ಸ್ ಸ್ಥಾಪಿನೆಯಾದ್ರೆ ಈ ಭಾಗದ ಯುವಕರಿ ಬೇರಡೆ ಹೋಗಿ ಕಡಿಮೆ ಸಂಭಳದಲ್ಲಿ ದುಡಿಯುವುದು ತಪ್ಪಲಿದೆ ಹೀಗಾಗಿ ಕೇಂದ್ರ ಸರ್ಕಾರಕ್ಕೆ ಆಗ್ರಹ ಕೂಡಾ ಮಾಡುತ್ತಿದ್ದಾರೆ.

ಒಟ್ಟಾರೆ ಮೋದಿ ಸರ್ಕಾರದ ಮೇಲೆ ಈ ಭಾಗದ ಜನರ ನಿರೀಕ್ಷೆ ಸಾಕಷ್ಟಿದ್ದು, ಕೇಂದ್ರದ ನಾಳೆನ ಬಜೆಟ್ ನಲ್ಲಿ ಇಲ್ಲಿನ ಜನರ ನಿರೀಕ್ಷೆಯಂತೆ ಯೋಜನೆಗಳ ಕೊಡುಗೆ ಸಿಗುತ್ತಾ? ಅಥವಾ ಹಸಿದ ಆನೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತೆ ಸಮಾಧಾನ ಪಡಿಸುವ ಕೆಲಸ ಮಾಡುತ್ತಾ ಕಾಯ್ದು ನೋಡಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button