ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ

ಬೆಂಗಳೂರು: ಕರ್ನಾಟಕ ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳ ಸೇವೆಯನ್ನ ಪರಿಗಣಿಸಿ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ನೀಡಲಾಗುವ ಪದಕಕ್ಕೆ ಈ ಬಾರಿ 19 ಪೊಲೀಸರು ಭಾಜನರಾಗಿದ್ದಾರೆ. ರಾಷ್ಟ್ರಪತಿ ಪೊಲೀಸ್ ಪದಕಕ್ಕೆ ಆಯ್ಕೆ ಅಗಿರುವ ಅಧಿಕಾರಿಗಳ ಪಟ್ಟಿಯನ್ನ ಬಿಡುಗಡೆಗೊಳಿಸಲಾಗಿದೆ.
ಭಾರತದ ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಗಣರಾಜ್ಯೋತ್ಸವ ದಿನವಾದ ನಾಳೆ ಪದಕಗಳನ್ನ ಹಸ್ತಾಂತರಿಸಲಾಗುತ್ತದೆ. ಪದಕ ವಿಜೇತ ಪೊಲೀಸ್ ಅಧಿಕಾರಿಗಳ ಪಟ್ಟಿ ಈ ಕೆಳಕಂಡಂತಿವೆ.
ಬಿ.ದಯಾನಂದ್, ಎಡಿಜಿಪಿ, ಗುಪ್ತಚರ ಇಲಾಖೆ
ಆರ್. ಹಿತೇಂದ್ರ, ಎಡಿಜಿಪಿ, ಕ್ರೈಂ ಎಂಡ್ ಟೆಕ್ನಿಕಲ್ ಸರ್ವಿಸ್
ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತ (ಸಂಚಾರ)
ರಾಮಯ್ಯ ಜನಾರ್ದನ್, ಕೆಎಸ್ಆರ್ಪಿ 5ನೇ ಬೆಟಾಲಿಯನ್
ಡಿ.ಕುಮಾರ್, ಎಸಿಪಿ, ಹಲಸೂರು ಉಪವಿಭಾಗ
ಪ್ರಭುದೇವ್ ರವಿ ಪ್ರಸಾದ್, ಹುಣಸೂರು, ಡಿವೈಎಸ್ಪಿ
ವೆಂಕಟಪ್ಪನಾಯಕ ಓಲೇಕಾರ್, ಸಿಂಧನೂರು ಡಿವೈಎಸ್ಪಿ
ಎಂ.ಮಲ್ಲೇಶಯ್ಯ, ಡಿವೈಎಸ್ಪಿ, ಆನೇಕಲ್ ಉಪವಿಭಾಗ
ಯಶವಂತಕುಮಾರ್, ಡಿವೈಎಸ್ಪಿ, ಸೈಬರ್ ಕ್ರೈಂ ಸಿಐಡಿ
ಗಂಗಾಧರ್ ಮಠಪತಿ, ಎಸಿಪಿ, ಸಿಸಿಆರ್ಬಿ, ಕಲಬುರಗಿ
ಕೆ.ಎಂ.ರಮೇಶ್, ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ
ಎಸ್.ಬಿ.ಕೆಂಪಯ್ಯ, ಸಿಐಡಿ ಡಿವೈಎಸ್ಪಿ
ಎಸ್. ಕೃಷ್ಣಮೂರ್ತಿ, ಲೋಕಾಯುಕ್ತ ಇನ್ಸ್ಪೆಕ್ಟರ್
ಸಿ.ಎಸ್. ಸಿಂಪಿ, KSRP, 1ನೇ ಬೆಟಾಲಿಯನ್ ಬೆಂಗಳೂರು
ಮೊಹಮ್ಮದ್ ದನೀಫ್, ARSIA, ಡಿಆರ್ ಬೆಳಗಾವಿ
ಎಮ್.ಎಚ್. ರೇವಣ್ಣ, ಎಎಸ್ಐ, ಜಂಟಿ ಸಿಪಿ ಕಚೇರಿ ಬೆಂಗಳೂರು



