ಮನರಂಜನೆಸಿನಿಮಾಸೆಲೆಬ್ರಿಟಿ
ವೇದ ಚಿತ್ರದ ಶೂಟಿಂಗ್ ಮಧ್ಯೆಯೂ ಶಕ್ತಿಧಾಮದ ಮಕ್ಕಳ ಜೊತೆ ಶಿವಣ್ಣನ ಜಾಲಿ ರೈಡ್

ಹ್ಯಾಟ್ರಿಕ್ ಹಿರೋ ಶಿವರಾಜ್ಕುಮಾರ್ ನಟನೆಯ ವೇದ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಶೂಟಿಂಗ್ ಮಧ್ಯೆಯೂ ಬಿಡುವು ಮಾಡಿಕೊಂಡ ಶಿವಣ್ಣ ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಗಣರಾಜ್ಯೋತ್ಸವ ಆಚರಿಸಿದ್ದಾರೆ. ಪತ್ನಿ ಗೀತಾ ಹಾಗೂ ನಿರ್ದೇಶಕ ಗುರುದತ್ ಜೊತೆ ಶಕ್ತಿಧಾಮಕ್ಕೆ ಭೇಟಿ ನೀಡಿದ ಶಿವರಾಜ್ಕುಮಾರ್ ಧ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಸಿಹಿ ವಿತರಿಸಿದರು. ಜೊತೆಗೆ ಶಕ್ತಿಧಾಮದ ಮಕ್ಕಳನ್ನ ಸ್ಕೂಲ್ ವ್ಯಾನ್ನಲ್ಲಿ ಕೂರಿಸಿಕೊಂಡು ಕೆಲವು ಸಮಯ ಜಾಲಿ ರೈಡ್ ಮಾಡಿದರು




