ಜಿಲ್ಲಾ ಸುದ್ದಿದಾವಣಗೆರೆ
ಭಾರೀ ಮಳೆ, ಗಾಳಿಗೆ ಧರೆಗುರುಳಿದ ಅಡಿಕೆ ಮರಗಳು…!

ದಾವಣಗೆರೆ: ಕಳೆದ ರಾತ್ರಿ ಸುರಿದ ಭಾರೀ ಗಾಳಿ ಹಾಗೂ ಮಳೆಯಿಂದಾಗಿ ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದಲ್ಲಿ ಅಡಿಕೆ ತೋಟದ ಗಿಡಗಳು ಸಂಪೂರ್ಣವಾಗಿ ನೆಲಕ್ಕುರುಳಿವೆ.
ಕೈದಾಳೆ ಗ್ರಾಮದ ರೈತ ತೊಳಸವ್ವರ ಬಸವರಾಜಪ್ಪ ಎಂಬುವವರಿಗೆ ಸೇರಿದ ಸುಮಾರು ಹದಿನೈದು ಅಡಿಕೆ ಗಿಡಗಳು ಧರೆಶಾಯಿಯಾಗಿದ್ದು, ಫಸಲಿಗೆ ಬಂದಿದ್ದ ಅಡಿಕೆ ಗಿಡಗಳು ಕಳೆದುಕೊಂಡ ರೈತ ಬಸವರಾಜಪ್ಪ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳು ಅನಾಹುತ ಸಂಭವಿಸಿದ್ದರೂ ಇಲ್ಲಿಯವರೆಗೂ ಕೂಡ ಬಂದು ಸ್ಥಳ ಪರಿಶೀಲನೆ ಮಾಡಿಲ್ಲ. ಜೊತೆಗೆ ಸುಮಾರು ಹದಿನೈದು ಅಡಿಕೆ ಗಿಡಗಳಿಂದ ಅಂದಾಜು ಅರುವತ್ತರಿಂದ ಎಪ್ಪತ್ತು ಸಾವಿರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತವಾದಂತಹ ಪರಿಹಾರ ಕಲ್ಪಿಸಿಕೊಡಿ ಎಂದು ರೈತ ಬಸವರಾಜಪ್ಪ ಅವರು ಒತ್ತಾಯಿಸಿದ್ದಾರೆ.




