ಉಡುಪಿ

ವ್ಯಕ್ತಿ ಅಪಹರಣ, ದರೋಡೆ ಪ್ರಕರಣ; ಮೂವರು ಆರೋಪಿಗಳ ಬಂಧನ

ಉಡುಪಿ: ಜು. 17ರಂದು ಉಡುಪಿ ನಗರದಲ್ಲಿ ಅಶೋಕ್ ಕುಮಾರ್ ಎಂಬವರನ್ನು ಅಪಹರಿಸಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಂತೋಷ, ಅನಿಲ್ ಪೂಜಾರಿ ಮತ್ತು ಮಣಿಕಂಠ ಖಾರ್ವಿ ಬಂಧಿತರು.ಇವರನ್ನು ಕಟಪಾಡಿ ಜಂಕ್ಷನ್‌ ಬಳಿ ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಪಿಸ್ತೂಲ್, ತಲವಾರುಗಳು ಹಾಗೂ ದೂರುದಾರ ಅಶೋಕ್ ಕುಮಾರ್ ರಿಂದ ಸುಲಿಗೆ ಮಾಡಿದ 1,35,000 ರೂ ನಗದು ಹಾಗೂ ಮೊಬೈಲ್ ನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಮೇಲೆ ಕಾಪು, ಕಾರ್ಕಳ ಗ್ರಾಮಾಂತರ,ಸುಬ್ರಮಣ್ಯ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಈ ಕೃತ್ಯದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು ಅವರನ್ನು ಬಂಧಿಸಲು ಉಡುಪಿ ನಗರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button