ಚಿಕ್ಕಮಗಳೂರುಜಿಲ್ಲಾ ಸುದ್ದಿ

ಭಾರೀ ಮಳೆಯಿಂದ ಕುಸಿದ ರಸ್ತೆ; ಸಂಚಾರ ನಿಷೇಧ

ಚಿಕ್ಕಮಗಳೂರು: ವಿಪರೀತ ಮಳೆಯಿಂದ ಹೊನ್ನಳ್ಳ ಚೆಕ್ಪೋಸ್ಟ್ ಬಳಿ ರಸ್ತೆಯು ಭಾಗಶಃ ಕೊಚ್ಚಿ ಹೋಗಿರುವ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಬದಲಿ ರಸ್ತೆಗಳನ್ನು ಬಳಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ಈ ರಸ್ತೆ ಕುಸಿದ ನಂತರ ಇನ್ನಷ್ಟು ಅನಾಹುತಕಾರಿಯಾಗಿದೆ. ಎಡಭಾಗದಲ್ಲಿ ಹೊನ್ನಾಳ ನದಿ ಹರಿಯುತ್ತದೆ. ಬಲಭಾಗದಲ್ಲಿ ಬಂಡೆಕಲ್ಲಿನ ಗುಡ್ಡವಿದೆ. ತಕ್ಷಣಕ್ಕೆ ದುರಸ್ತಿಕಾರ್ಯ ಅಸಾಧ್ಯವಾಗಿದೆ. ಕೆಳಮಲ್ಲಂದೂರಿನ ಸಿದ್ದರಬಾನು, ಮುತ್ತೋಡಿ, ಜಾಗರ, ಶಿರವಾಸೆ, ಗಾಳಿಗುಡ್ಡೆ ಗ್ರಾಮಗಳಿಗೆ ಸಂಪರ್ಕಿಸುವ ಈ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಹೀಗಾಗಿ ಮುತ್ತೋಡಿ, ಜಾಗರ, ಶಿರವಾಸೆ ಗ್ರಾಮಗಳಿಗೆ ತೆರಳಲು ಚಿಕ್ಕಮಗಳೂರಿನ ಕೈಮರ ಕ್ರಾಸ್, ಅತ್ತಿಗುಂಡಿ ಕ್ರಾಸ್ ಅಥವಾ ಚಿಕ್ಕಮಗಳೂರಿನಿಂದ ಆಲ್ದೂರು, ಕಡಬಗೆರೆ, ಖಾಂಡ್ಯ, ಕಡವಂತಿ, ಬೊಗಸೆ, ಹೊನ್ನಾಳ ಕ್ರಾಸ್ ರಸ್ತೆಗಳಲ್ಲಿ ಸಂಚರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button