Breaking Newsಬಾಗಲಕೋಟೆರಾಜಕೀಯರಾಜ್ಯ

ಸಿದ್ದರಾಮಯ್ಯ ಅವರಿಗೆ ಶಾಶ್ವತ ನಿರುದ್ಯೋಗ ಭಯ ಕಾಡುತ್ತಿದೆ; ಕಟೀಲ್ ವ್ಯಂಗ್ಯ

ಬಾಗಲಕೋಟೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ಒಂದು ಭಯ ಕಾಡುತ್ತಿದೆ.ಬಿಜೆಪಿ ಎಲ್ಲ ಉಪಚುನಾವಣೆ ಹಾಗೂ ಮಹಾನಗರ ಚುನಾವಣೆ ಅಭೂತಪೂರ್ವ ಗೆಲುವು ಕಂಡಿದೆ.ಇದೇ ರೀತಿ ಗೆಲುವು ಹೆಚ್ಚು ಮಾಡುತ್ತಾ ಹೋದ್ರೆ ನಾನು ಶಾಶ್ವತವಾಗಿ ನಿರುದ್ಯೋಗಿ ಆಗುತ್ತೇನೆ ಎಂಬ ಭಯ ಕಾಡುತ್ತಿದೆ ಎಂದು ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ 40 ಪರ್ಸೆಂಟ್ ಸರ್ಕಾರ ದೂರಿಗೆ ವ್ಯಂಗ್ಯವಾಡಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ರಾಜ್ಯ ಸರ್ಕಾರ ೪೦% ಕಮೀಷನ್ ಬಗ್ಗೆ ರಾಜ್ಯಪಾಲರಿಗೆ ಸಿದ್ದರಾಮಯ್ಯ, ಕಾಂಗ್ರೆಸ್ ದೂರಿಗೆ ಪ್ರತಿಕ್ರಿಯಿಸಿದರು, ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಮೇಲೆ ನಿರಂತರ ಸುಳ್ಳು ಸುದ್ದಿ, ಅಪಪ್ರಚಾರ ದೂರುಗಳನ್ನು ಕೊಡುತ್ತಿದ್ದಾರೆ ಎಂದರು.

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಅಸಭ್ಯ ವರ್ತನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಇಂತಹ ಅಸಭ್ಯ ವರ್ತನೆಗಳನ್ನು ನಮ್ಮ ಸರ್ಕಾರ‌ ಸಹಿಸುವುದಿಲ್ಲ.ಈ ಬಗ್ಗೆ ನಿರ್ಧಿಷ್ಟ ಕ್ರಮವನ್ನು ನಮ್ಮ ಸರ್ಕಾರ ಕೈಗೊಳ್ಳುತ್ತೆ ಎಂದರು.೪೦% ಸರ್ಕಾರದ ತನಿಖೆಗೆ ಆದೇಶ ವಿಚಾರಕ್ಕೆ.ಪಾರದರ್ಶಕ ವ್ಯವಸ್ಥೆ ಅಡಿ ನಮ್ಮ ಸರ್ಕಾರ ನಡೆಯುತ್ತಿದೆ.ಇಂತಹ ಯಾವುದೇ ದೂರು ಬಂದಾಗ ಎಚ್ಚರಿಕೆಯಿಂದ ನಮ್ಮ ಸಿಎಂ ಕ್ರಮ ಕೈಗೊಂಡಿದಾರೆ.ದಾಖಲೆಗಳನ್ನು ಕೊಡಬೇಕು, ಸುಳ್ಳು ಸುದ್ದಿ ಎಷ್ಟೇ ಹೇಳಬಹುದು.ದಾಖಲೇ ಇಲ್ಲದ ಆರೋಪ ಮಾಡಿದ್ರೂ.ಆ ದೂರನ್ನ ನಿರ್ಲಕ್ಷ್ಯ ಮಾಡದೆ ನಮ್ಮ ಸಿಎಂ ಸರಿಯಾದಂತಹ ಕ್ರಮ ಕೈಗೊಂಡಿದ್ದಾರೆ.ಆ ದೂರನ್ನ ನಿರ್ಲಕ್ಷ್ಯ ಮಾಡದೇ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.ಇದೇ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆರೋಪಗಳು ಬಂದಿದ್ದವು.ಅವರು ಎಲ್ಲಿ ತನಿಖೆಗೆ ಆದೇಶ ಮಾಡಿದ್ದಾರೆ? ಯಾವುದು ತನಿಖೆ ಆಗಿದೆ?.ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದರು.

ಪಾರದರ್ಶಕವಾಗಿ ಇವತ್ತು ದೂರು ಬಂದಾಗ ನಿರ್ಲಕ್ಷ್ಯ ಮಾಡದೆ ನಮ್ಮ ಸಿಎಂ ಜವಾಬ್ದಾರಿಯಿಂದ ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದರು. ಸರ್ಕಾರದಲ್ಲಿ ದುಡ್ಡಿಲ್ಲ, ಗುತ್ತಿಗೆದಾರರಿಗೆ ಬಿಲ್ ಆಗ್ತಿಲ್ಲ ಎನ್ನುವ ಗುತ್ತಿಗೆದಾರರ ಸಂಘದ ದೂರಿಗೆ ಯಾವುದೇ ಅಧ್ಯಕ್ಷ, ಸಂಘಟನೆ ಇರಲಿ.ದಾಖಲೆ, ಮಾಹಿತಿ ಇಲ್ಲದೇ ಆರೋಪ ಮಾಡುವುದು ಸರಿಯಲ್ಲ.ನಮ್ಮ ಸರ್ಕಾರ ಕ್ರಮ‌ ಕೈಗೊಳ್ಳುತ್ತದೆ ಎಂದು ಹೇಳಿದರು. ಗ್ರಾಪಂ ಗಳಿಗೆ ತಲಾ ೪೦ ಲಕ್ಷ ಕೋಟಿ ರೂಪಾಯಿ ಕೊಡುತ್ತೇವೆ ಎಂಬ ಕಟೀಲ್ ಹೇಳಿಕೆ ವೈರಲ್ ಆಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಆ ಮಾಹಿತಿ, ವರದಿ ತರಿಸಿಕೊಳ್ಳಿ,ನಾನೇನು ಹೇಳಿದ್ದೀನಿ ಪ್ರತಿ ಪಂಚಾಯ್ತಿಗೆ ಒಂದು ಕೋಟಿ.೧೫ನೇ ಹಣಕಾಸಿನ ಅಡಿ ಅಭಿವೃದ್ಧಿಗೆ ಒಂದು ಕೋಟಿ ಕೊಟ್ಟಿದೆ.ನಾನು ಆ ರೀತಿ ಹೇಳಿಲ್ಲ ಎಂದು ಅಲ್ಲಗಳೆದರು.ಎಸಿಬಿ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆ, ಭ್ರಷ್ಟಾಚಾರ ನಿಲ್ಲುತ್ತಾ ಎಂಬ ಪ್ರಶ್ನೆಗೆ ,ಪಾರದರ್ಶಕವಾಗಿ ಎಸಿಬಿ ಅದರದೇ ಆದ ವ್ಯವಸ್ಥೆಯಲ್ಲಿ ಕ್ರಮ ಕೈಗೊಳ್ಳುತ್ತೆ.ಹಾಗಾಗಿ ಯಾರೇ ಭ್ರಷ್ಟಾಚಾರ ಮಾಡಿದ್ರೆ ಉಳಿಗಾಲ ಇಲ್ಲ ಎನ್ನುವ ಭಯ ಸೃಷ್ಟಿಯಾಗಿದೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button