ಪ್ರಧ್ಯುಮ್ನನ ಸಂಹಾರ

ಸಂಬಾರನೆಂಬ ರಾಕ್ಷಸನಿರುತ್ತಾನೆ. ಪ್ರಧ್ಯುಮ್ನನ ಜನನದ ಸುದ್ದಿ ಅವನಿಗೆ ತಿಳಿಯುತ್ತಲೇ, ಅವನನ್ನು ಅಪಹರಿಸಿ ಸಮುದ್ರಕ್ಕೆ ಎಸೆಯುತ್ತಾನೆ. ದೊಡ್ಡ ಮೀನೊಂದು ಪ್ರಧ್ಯುಮ್ನನನ್ನು ನುಂಗಿ ಹಾಕುತ್ತದೆ. ಆ ಮೀನನ್ನು ಮೀನುಗಾರನೊಬ್ಬ ಹಿಡಿಯುತ್ತಾನೆ. ಮುಂದೆ ಸಾಂಬಾರನಿಗೆ ಮಾರಾಟ ಮಾಡುತ್ತಾನೆ. ಆ ಅಸುರನ ಅಡಿಗೆ ಮನೆಯಲ್ಲಿ ಮಾಯಾವತಿ ಎಂಬ ಸೇವಕಿ ಇರುತ್ತಾಳೆ.
ಆಕೆ ಮೊದಲಿಗೆ ಕಾಮದೇವನ ಸತಿ. ಅಡುಗೆಯಾತ ಮೀನನ್ನು ಕತ್ತರಿಸುತ್ತಿರುವಾಗ ಅವನಿಗೆ ಮೀನಿನ ಹೊಟ್ಟೆಯಲ್ಲಿದ್ದ ಮಗು ಕಾಣುತ್ತದೆ. ಆ ಮಗುವನ್ನು ಆತ ಮಾಯಾವತಿಗೆ ಕೊಡುತ್ತಾನೆ. ಮೀನಿನ ಹೊಟ್ಟೆಯಲ್ಲಿದ್ದ ಮಗುವನ್ನು ಕಂಡು ವಿಸ್ಮಯಳಾಗುತ್ತಾಳೆ ಮಾಯಾವತಿ. ಆಗ ನಾರದ ಅಲ್ಲಿಗೆ ಬಂದು ಪ್ರಧ್ಯುಮ್ನನ ಜನನ ಹಾಗೂ ತದನಂತರದ ವೃತ್ತಾಂತವನ್ನು ತಿಳಿಸುತ್ತಾನೆ.
ವಿಸ್ಮಯವೆನ್ನುವಂತೆ ಮಗು ಶೀಘ್ರದಲ್ಲೇ ಬೆಳೆದು ದೊಡ್ಡದಾಗುತ್ತದೆ. ಪ್ರಧ್ಯುಮ್ನ ಸಾಂಬಾರನೊಡನೆ ಯುದ್ಧ ಮಾಡುತ್ತಾನೆ. ಅವರೀರ್ವರ ನಡುವೆ ಘೋರವಾದ ಕಾಳಗ ನಡೆಯುತ್ತದೆ. ಪ್ರಧ್ಯುಮ್ನ ರತಿಯಿಂದ ಪಡೆದ ಮಹಾಮಾಯ ಅಸ್ತ್ರವನ್ನು ಪ್ರಯೋಗಿಸುತ್ತಾನೆ. ಅದರ ಮುಂದೆ ನಿಲ್ಲಲಾಗದ ಸಾಂಬಾರ ನೆಲಕ್ಕೆ ಉರುಳುತ್ತಾನೆ. ಪ್ರಧ್ಯುಮ್ನ ತನ್ನ ಕತ್ತಿಯಿಂದ ಸಾಂಬಾರನ ಶಿರಸ್ಸನ್ನು ಕತ್ತರಿಸುತ್ತಾನೆ. ರತಿಗೆ ಶಾಪ ವಿಮೋಚನೆಯಾಗುತ್ತದೆ. ಕೃತವರ್ಮನನ್ನು ಕೊಂದ ಸಾತ್ಯಕಿಯ ಬಳಿ ಪ್ರಧ್ಯುಮ್ನನನ್ನು ಸಂಹರಿಸುತ್ತಾನೆ.




