Breaking News
ಹೇಳದೆ ಕೇಳದೆ ಪಿಎ ಬಂಧಿಸಿದ್ದಕ್ಕೆ ಸಚಿವ ಶ್ರೀರಾಮುಲು ಅಸಮಾಧಾನ
ಬೆಂಗಳೂರು: ವಿಜಯೇಂದ್ರ ಹೆಸರು ಹೇಳಿಕೊಂಡು ಹಣಕ್ಕೆ ಬೇಡಿಕೆಯಿಡುತ್ತಿದ್ದರು ಎಂಬುದು ರಾಜಣ್ಣ ಮೇಲೆ ಬಂದಿರುವ ಆರೋಪ. ಆದರೆ, ಬಂಧನಕ್ಕೆ ಮೊದಲು ಈ ಬಗ್ಗೆ ಶ್ರೀರಾಮುಲು ಅವರಿಗೆ ಯಾವ ಮಾಹಿತಿಯೂ ಇರಲಿಲ್ಲ ಎಂಬುದನ್ನು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದ ಎದುರು ಮಾತನಾಡಿದ ವೇಳೆ, ತಮಗೆ ಈ ಬಗ್ಗೆ ಏನೂ ಗೊತ್ತಿರಲಿಲ್ಲ. ಮಾಧ್ಯಮಗಳಲ್ಲಿ ನೋಡಿಯೇ ತಿಳಿದುಕೊಂಡೆ. ವಿಜಯೇಂದ್ರ ಅವರೂ ಕೂಡ ಈ ಬಗ್ಗೆ ತಮಗೆ ತಿಳಿಸಲಿಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.
ರಾಜಣ್ಣ ನನಗೆ ಗೊತ್ತಿರುವ ಹುಡುಗ. ಒಂದು ವೇಳೆ ಆತ ಹೆಸರು ದುರ್ಬಳಕೆ ಮಾಡಿಕೊಂಡಿದ್ದರೆ ಅದರ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಬೇಕು. ವಿಜಯೇಂದ್ರ ಜೊತೆ ಮಾತನಾಡುವೆ ಎಂದರು.
ಈ ನಡುವೆ, ಶ್ರೀರಾಮುಲು ಅವರಿಗೆ ಅಸಮಾಧಾನವಾಗಿದೆ ಎಂಬ ಮಾತುಗಳೂ ಕೇಳಿಬಂದಿದ್ದು, ಅವರನ್ನು ಕರೆಸಿ ಮಾತನಾಡಲು ಸಿಎಂ ಮುಂದಾಗಿದ್ದಾರೆ ಎಂಬ ವರದಿಗಳೂ ಇವೆ.
ಇದನ್ನೂ ಓದಿ: ಭಿನ್ನ ಬಣದ ಶ್ರೀರಾಮುಲುಗೆ ಬಿಎಸ್ವೈ ಎದಿರೇಟು; ಇದು ಆಪ್ತನ ಬಂಧನದ ಅಸಲಿಯತ್ತು!
