ಧರ್ಮ

ರುದ್ರಾಕ್ಷಿ ಧರಿಸಿದರೆ ಶಿವ ಮೆಚ್ಚುತ್ತಾನೆ-ಯಮ ನಡುಗುತ್ತಾನೆ!

ರುದ್ರಾಕ್ಷಿ ಎನ್ನುವುದು ವೇರಾಲು ಎಂಬ ಮರದ ಬೀಜವಾಗಿದ್ದು, ಭಾರತದ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಬೆಳೆಯುತ್ತದೆ. ಈ ರುದ್ರಾಕ್ಷಿಯೊಂದು ಅಪರೂಪದ ಸಸ್ಯ ಸಂಕುಲ. ಈ ಮರದ ರಂಬೆಗಳನ್ನು ಸ್ಲೀಪರ್ ಕೋಚ್ ರೈಲಿನಲ್ಲಿ ಬಳುಸುವುದರಿಂದ, ಇದು ಸಿಗುವುದೇ ಅಪರೂಪವಾಗುತ್ತಿದೆ. ನೇಪಾಳ, ಬರ್ಮಾ, ಥೈಲಾಂಡ್ ಹಾಗೂ ಇಂಡೋನೇಷ್ಯಾದಲ್ಲಿ ಈ ರುದ್ರಾಕ್ಷಿ ಹೆಚ್ಚಾಗಿ ಸಿಗುತ್ತದೆ.

ದಕ್ಷಿಣ ಭಾರತ ಪಶ್ಚಿಮ ಘಟ್ಟಗಳಲ್ಲಿಯೂ ಸಿಗುವ ಈ ರುದ್ರಾಕ್ಷಿಯಲ್ಲಿ ವಿಶೇಷ ಕಂಪನದ ಪ್ರಭಾವವಿದ್ದು, ದೈವಿಕ ಶಕ್ತಿ ಇದೇ ಎಂದು ನಂಬಲಾಗುತ್ತದೆ. ಇದನ್ನು ಸಾಂಪ್ರದಾಯಿಕವಾಗಿ ಹಿಂದೂಗಳು ಮತ್ತು ಬೌದ್ಧರು ಪ್ರಾರ್ಥನಾ ಮಣಿಗಳಾಗಿ ಬಳಸುತ್ತಾರೆ. ರುದ್ರಾಕ್ಷಿ ಮಣಿಗಳು ಜ್ಞಾನ ಮತ್ತು ವಿಮೋಚನೆಗಾಗಿ ಯೋಗಿಗಳು ಮತ್ತು ಖುಷಿ ಮುನಿಗಳು ಧರಿಸುವ ವೈದಿಕ ಶಕ್ತಿಯ ಮಣಿಗಳಾಗಿವೆ.

ಇದು ಆತಂಕವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ರುದ್ರಾಕ್ಷಿ ಧರಿಸುವವರಿಗೆ ಮಾನಸಿಕ ಶಾಂತಿ ದೊರೆಯುವುದು ಎನ್ನಲಾಗುತ್ತದೆ. ಆ ಮಹಾ ಶಿವನೇ ಪಾರ್ವತಿದೇವಿಗೆ ಸಾವಿರಾರು ರುದ್ರಾಕ್ಷಿಗಳನ್ನು ಧರಿಸುವ ಕ್ರಮವನ್ನು ತಿಳಿಸಿದ್ದಾನೆ.
ಶಿಖೆಯಲ್ಲಿ ಒಂದು ರುದ್ರಾಕ್ಷಿಯನ್ನೂ, ಶಿರಸ್ಸಿನಲ್ಲಿ ನಲವತ್ತು ರುದ್ರಾಕ್ಷಿಗಳನ್ನೂ, ಕಂಠದಲ್ಲಿ ಮೂವತ್ತೆರಡು ರುದ್ರಾಕ್ಷಿಗಳನ್ನೂ, ಎದೆಯಲ್ಲಿ ನೂರೆಂಟು ರುದ್ರಾಕ್ಷಿಗಳನ್ನೂ, ಕೈಗಳೆರಡರಲ್ಲಿ ಹದಿನಾರು ರುದ್ರಾಕ್ಷಿಗಳನ್ನೂ, ಕಿವಿಯಲ್ಲೊಂದು, ಬಾಹುಗಳಲ್ಲಿ ಆರಾರು ರುದ್ರಾಕ್ಷಿಗಳನ್ನೂ ಯಾವ ಶಿವಭಕ್ತನು ಧರಿಸುವನೋ, ಅವನನ್ನು ಶಿವನಂತೆ ಎಲ್ಲರೂ ಸದಾ ಪೂಜಿಸಬೇಕು ಮತ್ತು ನಮಸ್ಕರಿಸಬೇಕು ಎಂದು ಹೇಳಿದನು.

ಹಾಗೂ ಭಸ್ಮ ತ್ರಿಪುಂಡ್ರವನ್ನು ಧರಿಸುವವರೂ ಜಟಾಧಾರಿಗಳೂ ರುದ್ರಾಕ್ಷಿಯನ್ನು ಧರಿಸುವವರೂ ಎಂದಿಗೂ ಯಮಲೋಕಕ್ಕೆ ಹೋಗುವುದಿಲ್ಲ. ಯಾರು ರುದ್ರಾಕ್ಷಿವೊಂದನ್ನಾದರೂ ಶಿರಸ್ಸಿನಲ್ಲಿ ಧರಿಸುವರೋ, ಭಸ್ಮತ್ರಿಪುಂಡ್ರವನ್ನು ಧರಿಸುವರೋ, ಶಿವಪಂಚಾಕ್ಷರಮಂತ್ರವನ್ನಜಪಿಸುವರೋ, ಅವರನ್ನು ಎಲ್ಲರೂ ಪೂಜಿಸಬೇಕು. ಇಂತಹ ಶಿವಭಕ್ತರು ಸಾಧುವು ಮತ್ತು ಸತ್ಪುರುಷರೂ ಆಗಿರುತ್ತಾರೆ.

ಯಾರ ಶರೀರದಲ್ಲಿ ರುದ್ರಾಕ್ಷಿ ಇಲ್ಲವೋ, ಹಣೆಯಲ್ಲಿ ವಿಭೂತಿಯಿಲ್ಲವೋ, ನಾಲಿಗೆಯಲ್ಲಿ ಶಿವಪಂಚಾಕ್ಷರಿ ಮಂತ್ರವಿಲ್ಲವೋ, ಅವರನ್ನು ಯಮಲೋಕಕ್ಕೆ ಕರೆ ತನ್ನಿ ಎಂದು ಸ್ವತಃ ಯಮನೇ ತನ್ನ ಧೂತರಿಗೆ ಆಜ್ಞಾಪಿಸಿದ್ದಾನೆ. ಅಂದಿನಿಂದ ಇಲ್ಲಿಯವರೆಗೆ ಭಸ್ಮ-ರುದ್ರಾಕ್ಷಿಧಾರಿಗಳು ಯಮಲೋಕಕ್ಕೆ ಹೋಗಿಲ್ಲ ಎಂದು ಸೂತಮುನಿ ತಿಳಿಸುವುದರ ಜೊತೆಗೆ ಪರಶಿವ ಭಸ್ಮ-ರುದ್ರಾಕ್ಷಿಗಳ ಮಹಿಮೆಯನ್ನು ಪಾರ್ವತಿಗೆ ತಿಳಿಸಿದ್ದ ಎಂದು ಹೇಳಲಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button