ರಾಷ್ಟ್ರೀಯಸುದ್ದಿ

ಕೋರೋನಾ ಸಂಬಂಧಿತ ಪ್ರಕರಣಗಳನ್ನು ರದ್ದುಗೊಳಿಸಿದ ‘ಮಹಾ’ ಸರ್ಕಾರ

ಮುಂಬೈ (ಮಹಾರಾಷ್ಟ್ರ): ಎರಡು ವರ್ಷಗಳ ಹಿಂದೆ ಕೊವಿಡ್ 19 ಬಂದಾಗ ಇಡೀ ಪ್ರಪಂಚವೇ ತಲ್ಲಣಿಸಿ ಹೋಗಿತ್ತು. ಅದಕ್ಕೆ ಭಾರತವೂ ಹೊರತಾಗಿರಲಿಲ್ಲ. ನಮ್ಮ ಪ್ರಧಾನಿ ಇಡೀ ಭಾರತವನ್ನೇ 40ದಿನಗಳ ಕಾಲ ಲಾಕ್​ಡೌನ್ ಮಾಡಿಬಿಟ್ಟಿದ್ದರು. ಲಾಕ್​ಡೌನ್ ಸಮಯದಲ್ಲಿ ಅದನ್ನು ಉಲ್ಲಂಘಿಸಿದ ಲಕ್ಷಾಂತರ ನಾಗರಿಕರ ಮೇಲೆ ಆಯಾ ರಾಜ್ಯಸರ್ಕಾರಗಳು ಪ್ರಕರಣ ದಾಖಲಿಸಿದ್ದವು. ಅದರ ಜೊತೆಗೆ ಮಾಸ್ಕ್ ಧರಿಸಿಲ್ಲದ ಕಾರಣಕ್ಕೂ ಪ್ರಕರಣಗಳು ದಾಖಲಾಗಿದ್ದವು. ಹೀಗೆ ಲಾಕ್​ಡೌನ್ ಸಮಯದಲ್ಲಿ ಕೊರೋನಾಗೆ ಸಂಬಂಧಿಸಿದಂತೆ ರಾಜ್ಯ ಕೇಂದ್ರ ಸರ್ಕಾರಗಳು ಮಾಡಿದ್ದ ಕಾನೂನನ್ನು ಉಲ್ಲಂಘಿಸಿದವರ ಮೇಲೆ ಕೇಸ್ ದಾಖಲಾಗಿ ಜನರು ಕೊರೋನಾದ ಜೊತೆಗೆ ಈ ಕೇಸ್​ಗಳಿಂದಲೂ ಸಹ ಹೈರಾಣಾಗಿದ್ದರು.

ಆದರೆ ಇದೀಗ ಮಹಾರಾಷ್ಟ್ರದಲ್ಲಿ ಕೊರೋನಾ ಲಾಕ್​ಡೌನ್ ಕಾಲದಲ್ಲಿ ಅದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ. ಈ ವಿಷಯವನ್ನು ಮಹಾರಾಷ್ಟ್ರದ ಗೃಹಮಂತ್ರಿ ದಿಲೀಪ್ ವಾಲ್ಸೆ ಪಾಟೀಲ್ ಮಂಗಳವಾರ ಪ್ರಕಟಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button