Latestಜಿಲ್ಲಾ ಸುದ್ದಿಮೈಸೂರು

ಕಾಲ್ನಡಿಗೆ ಮೂಲಕ ಕಾಶಿ ತಲುಪಿದ ಮೈಸೂರಿನ ಯೋಗ ಶಿಕ್ಷಕ

ಮೈಸೂರು : ಯೋಗ ಶಿಕ್ಷಕ ಕೃಷ್ಣ ನಾಯಕ್‌ ಅವರ ಕಾಶಿ ಪಾದಯಾತ್ರೆ ಸಂಪೂರ್ಣ ಯಶಸ್ವಿಯಾಗಿದೆ. 2021ರ ನವೆಂಬರ್ 15ರಂದು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇಗುಲದಿಂದ ಆರಂಭವಾಗಿದ್ದ ಪಾದಯಾತ್ರೆ ಪೂರ್ಣಗೊಂಡಿದೆ. 2 ತಿಂಗಳ ಅವಧಿಯಲ್ಲಿ 2,030 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದಾರೆ.

ಯೋಗ ಶಿಕ್ಷಕ ಕೃಷ್ಣ ನಾಯಕ್‌ ಅವರು 2021ರ ನವೆಂಬರ್ 15ರಂದು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇಗುಲದಿಂದ ಕಾಶಿಗೆ ಪಾದಯಾತ್ರೆ ಆರಂಭ ಮಾಡಿದ್ದರು. ಸದ್ಯ ಮೈಸೂರಿನಿಂದ ಕೈಗೊಂಡ ಪಾದಯಾತ್ರೆ ಪೂರ್ಣಗೊಂಡಿದೆ. 28 ವರ್ಷದ ಕೃಷ್ಣ ನಾಯಕ್ ಮೈಸೂರು ತಾಲೂಕು ಉದ್ಬೂರು ಗ್ರಾಮದ ನಿವಾಸಿ. ಇವರು ಯೋಗದ ಬಗ್ಗೆ ಜಾಗೃತಿಗಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದರು.

ಎರಡು ತಿಂಗಳ ಅವಧಿಯಲ್ಲಿ ಮೈಸೂರಿನಿಂದ ಕಾಶಿಗೆ ಪಾದಯಾತ್ರೆ ಮಾಡಿದ್ದಾರೆ. ಸುಮಾರು 2,030 ಕಿಲೋ ಮೀಟರ್ ನಡೆದು ಕಾಶಿಗೆ ಯಾತ್ರೆ ಮುಗಿಸಿದ್ದಾರೆ. ಮಾರ್ಗ ಮಧ್ಯೆ ಪ್ರಾಣಾಯಾಮ ಆಧ್ಯಾತ್ಮಿಕ ವಿಚಾರದ ಬಗ್ಗೆ ಶಿಬಿರಗಳನ್ನು ಮಾಡುತ್ತ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಯೋಗ, ಆಧ್ಯಾತ್ಮದ ಬಗ್ಗೆ ಮಾಹಿತಿ ನೀಡುತ್ತ ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button