Latestದಾವಣಗೆರೆರಾಜಕೀಯ

ಹಿಜಾಬ್- ಕೇಸರಿ ಶಾಲು ಎರಡು ಸದ್ಯ ಕಾನೂನು ಬಾಹಿರ : ಜಿ.ಎಂ.ಸಿದ್ದೇಶ್ವರ್

ದಾವಣಗೆರೆ: ಹಿಜಾಬ್ – ಕೇಸರಿ ಶಾಲು ಎರಡು ಸದ್ಯ ಕಾನೂನು ಬಾಹಿರ. ಎಲ್ಲರೂ ಸಮವಸ್ತ್ರದಲ್ಲಿ ಬರಬೇಕು ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಹಾಗೂ ಕೇಸರಿ ಸಂಘರ್ಷ ಸಂಬಂಧ ಈಗಾಗಲೇ ಕೋರ್ಟ್ ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ಎಲ್ಲರೂ ಈ ಪ್ರಕಾರ ನಡೆದುಕೊಳ್ಳಲಿ. ಈ ವಿಚಾರದಲ್ಲಿ ಗೊಂದಲ ಬೇಡ ಎಂದು ತಿಳಿಸಿದರು.

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ವಿಚಾರವಾಗಿ ಯಾವುದೇ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ. ಹಾಗಾಗಿ ಹೆಚ್ಚು ಮಾತನಾಡಲಾರೆ ಎಂದು ಹೇಳಿದರು.

ಸಿಎಂ ಇಬ್ರಾಹಿಂಗೆ ಕೇಳಿ ಹೇಳುವೆ ಅವರು ಹರಹರ ಮಹಾದೇವ ಎನ್ನುತ್ತಾರೆ. ಹಿಜಾಬ್ -ಕೇಸರಿ ಗದ್ದಲದಲ್ಲಿ ಮಂಡ್ಯದಲ್ಲಿ ವಿದ್ಯಾರ್ಥಿನಿ ಅಲ್ಲಾವು ಅಕ್ಬರ್ ಎಂದು ಕೂಗಿದ್ದಾಳೆ. ಕೆಲವರು ಐದು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ‌.‌ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂಗೆ ಕೇಳುವೆ. ನೀವು ಹರಹರ ಮಹಾದೇವ ಎನ್ನುವಿರಿ ಎಂದು ಸಿದ್ದೇಶ್ವರ್ ವ್ಯಂಗ್ಯವಾಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button