
ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸಭೆ ಮುಗಿಸಿ ತಮ್ಮ ಕೊಠಡಿಗೆ ಬಂದಾಗ ಅವರ ಜೊತೆ ಯಾರೂ ಇರಲಿಲ್ಲ.. ಅವರ ಸುತ್ತ ಮುತ್ತಲಿನ ಬಹಳಷ್ಟು ಜನ ಕ್ಯಾಂಪ್ ಬದಲಿಸಿಬಿಟ್ಟಿದ್ದರು. ನರ್ಸ್ ರೇಣುಕಾಚಾರ್ಯ ಪ್ರಲ್ಹಾದ್ ಜೋಷಿ ಮನೆಯ ಕಿಡಕಿ ಬಾಗಿಲು ಬಡಿಯುತ್ತಿದ್ದರು,, ಇದು ಯಡಿಯೂರಪ್ಪ ಅವರ ಕಥೆ ಮಾತ್ರವಲ್ಲ.. ಎಲ್ಲ ಮುಖ್ಯಮಂತ್ರಿಗಳು ಇಂತಹ ನೋವು ಅನುಭವಿಸಿದ್ದಾರೆ,.. ದೇವರಾಜ್ ಅರಸು ಅವರು ಅಧಿಕಾರ ಕಳೆದುಕೊಂಡ ಮೇಲೂ ಅವರ ಮನೆಯಲ್ಲಿ ಯಾರೂ ಇರಲಿಲ್ಲ.. ಗುಂಡೂರಾವ್, ರಾಮಕೃಷ್ಣ ಹೆಗಡೆ, ವೀರಪ್ಪ ಮೊಯ್ಲಿ, ಬಂಗಾರಪ್ಪ ಅವರು ಅಧಿಕಾರ ಕಳೆದುಕೊಂಡಾಗಲೂ ಇದೇ ಸ್ಥ್ತಿತಿ,, ಶಶಿಧರ್ ಭಟ್ ಅವರ ಸುದ್ದಿ ವಿಶ್ಲೇಷಣೆ



