Breaking NewsLatestಜಿಲ್ಲಾ ಸುದ್ದಿದಾವಣಗೆರೆ

ಜೈಲರ್ – ಮುತಾಲಿಕ್ ನಡುವೆ ವಾಗ್ವಾದ ನಡೆದದ್ದು ಯಾಕೆ..?

ದಾವಣಗೆರೆ: ಜೈಲಿನಲ್ಲಿದ್ದ ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಲು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗಮಿಸಿದ ವೇಳೆ ಜೈಲರ್ ಜೊತೆ ವಾಗ್ವಾದ, ಮಾತಿನ ಚಕಮಕಿ ನಡೆದ ಘಟನೆ ಇಲ್ಲಿನ ಉಪಕಾರಾಗೃದಲ್ಲಿ ನಡೆದಿದೆ.

ಪ್ರಮೋದ್ ಮುತಾಲಿಕ್ ಅವರಿಗೆ ಒಳಗಡೆ ಪ್ರವೇಶಕ್ಕೆ ಜೈಲಿನ ಸಿಬ್ಬಂದಿ ನಿರಾಕರಿಸಿದರು. ಈ ವೇಳೆ ಮಾತಿನ ಚಕಮಕಿ‌ ನಡೆಯಿತು‌. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿ ಹಿಜಾಬ್-ಕೇಸರಿ ಶಾಲು ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿತ್ತು. ಈ ವೇಳೆ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಲ್ಲಿದ್ದವರ ಭೇಟಿಗೆ ಕಾರಾಗೃಹದ ಬಳಿ ಪ್ರಮೋದ್ ಮುತಾಲಿಕ್ ಸೇರಿದಂತೆ ಶ್ರೀರಾಮ ಸೇನೆ ಮುಖಂಡರು, ಕಾರ್ಯಕರ್ತರು ಆಗಮಿಸಿದರು‌. ಈ ವೇಳೆ ದಾವಣಗೆರೆ ಜಿಲ್ಲಾ ಉಪ ಕಾರಾಗೃಹದ ಮುಂದೆ ಭಾರಿ ಹೈಡ್ರಾಮಾವೇ ನಡೆದು ಹೋಯ್ತು.

ಹಿಂದೂ ಕಾರ್ಯಕರ್ತರ ಭೇಟಿಗೆ ಮುತಾಲಿಕ್ ಅವಕಾಶ ಕೇಳಿದರು. ಅವರ ಜೊತೆ ಮಾತನಾಡಬೇಕೆಂದು ಮನವಿ ಮಾಡಿದರು. ಈ ವೇಳೆ ಜೈಲಲ್ಲಿ ಭೇಟಿಗೆ ಅವಕಾಶ ನೀಡಲು ಆಗದು ಎಂದು ಜೈಲರ್ ನಿರಾಕರಿಸಿದರು‌. ಆಗ ಶ್ರೀರಾಮ ಸೇನೆ ಕಾರ್ಯಕರ್ತರು ಮತ್ತು ಜೈಲರ್ ಮಧ್ಯೆ ವಾಗ್ವಾದ ನಡೆಯಿತು‌. ಹಿಂದೂ ಕಾರ್ಯಕರ್ತರ ಭೇಟಿಗೆ ಅವಕಾಶ ನೀಡಲು ಯಾಕೆ ಈ ರೀತಿ ವರ್ತಿಸುತ್ತೀರಾ. ಬೇರೆಯವರಿಗಾದರೆ ಅವಕಾಶ ಕೊಡುತ್ತೀರಾ ಎಂದು ಮುತಾಲಿಕ್ ಪ್ರಶ್ನಿಸಿದರು‌.

ದಾವಣಗೆರೆ ನಲ್ಲೂರಿನಲ್ಲಿ ಹಿಜಾಬ್ ವಿಚಾರಕ್ಕೆ ಗಲಾಟೆಯಾಗಿತ್ತು.‌ ಹಿಜಾಬ್ ಬಗ್ಗೆ ಯುವಕನೊಬ್ಬ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ ಅಂತ ಎರಡು ಕೋಮುಗಳ ಮಧ್ಯೆ ಗಲಾಟೆ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿಂದಂತೆ ನಾಲ್ವರು ಹಿಂದೂ ಕಾರ್ಯಕರ್ತರನ್ನ ಬಂಧಿಸಲಾಗಿತ್ತು. ಬಂಧಿತರ ಭೇಟಿಗೆ ಅವಕಾಶ ಕಲ್ಪಿಸುವಂತೆ ವಾಗ್ವಾದ ನಡೆದ ಬಳಿಕ ಅಂತಿಮವಾಗಿ ಮುತಾಲಿಕ್ ರ ಆಗ್ರಹಕ್ಕೆ ಮಣಿದು ಹಿಂದೂ ಕಾರ್ಯಕರ್ತರ ಭೇಟಿಗೆ ಅವಕಾಶ ಕೊಡಲಾಯಿತು.

ಇದಕ್ಕೂ ಮುನ್ನ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು ಹರಿಹರ, ಮಲೇಬೆನ್ನೂರು, ನಲ್ಲೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಆದ್ರೆ ದಾವಣಗೆರೆ ಪೊಲೀಸರು ಹಿಂದೂಗಳ ಮೇಲೆ ಮಾತ್ರ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಅವರ ಮೇಲೆ ಯಾಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button