Latestಕೊಡಗುಜಿಲ್ಲಾ ಸುದ್ದಿ
K G Bopaiah: ಅಪರಿಚಿತರಿಂದ ಶಾಸಕರಿಗೆ ಹಣದ ಬೇಡಿಕೆ : ದೂರು ದಾಖಲು

ಕೊಡಗು : ನಿನ್ನೆ ರಾತ್ರಿ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆಮಾಡಿ “ತಾವು ಎ.ಸಿ.ಬಿ ಅವರು, ತಮ್ಮ ಮೇಲೆ. ಎ.ಸಿ.ಬಿ ದಾಳಿ ಮಾಡಲು ಸಜ್ಜಾಗುತ್ತಿದ್ದು ಈ ಎ.ಸಿ.ಬಿ ದಾಳಿಯನ್ನು ತಡೆಹಿಡಿಯಲು ಒಂದು ಕೋಟಿ ರೂ ನೀಡಬೇಕೆಂದು ವಿರಾಜಪೇಟೆ ಶಾಸಕ ಬೋಪಯ್ಯ ಅವರಿಗೆ” ಹಣದ ಬೇಡಿಕೆ ಒಡ್ಡಿರುವ ಘಟನೆ ಸಂಭವಿಸಿದೆ.
ಕೆ.ಜಿ. ಬೋಪಯ್ಯನವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣೆಯಲ್ಲಿ ಧಾವೆ ಹೂಡಿರುತ್ತಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಾರಂಭವಾಗಿದೆ.
ಅಪರಿಚಿತ ಮೊಬೈಲ್ ಸಂಖ್ಯೆಯಲ್ಲಿ ಝಹೀಬ್ ಖಾನ್ ಎನ್ನುವವರದ್ದು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು. ತನಿಖೆ ನಂತರ ಸತ್ಯಾಸತ್ಯತೆ ಬಯಲಾಗಬೇಕಿದೆ.



