Latestಜಿಲ್ಲಾ ಸುದ್ದಿಮೈಸೂರು

ವಿವಾಹಿತೆಗೆ ಅಪರಿಚಿತ ಯುವಕನಿಂದ ಲೈಂಗಿಕ ಕಿರುಕುಳ ಪತಿಯ ಆವಾಜ್ ಗೆ ಹೆದರಿ ಯುವಕ ಆತ್ಮಹತ್ಯೆ

ಮೈಸೂರು : ವಿವಾಹಿತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಅಪರಿಚಿತ ಯುವಕನಿಗೆ ಮಹಿಳೆಯ ಪತಿ ಅವಾಜ್ ಹಾಕಿದ್ದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಯರಗನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಯರಗನಹಳ್ಳಿ ನಿವಾಸಿ ಪ್ರಜ್ವಲ್ (19) ಮೃತ ಯುವಕ ಎಂದು ಗುರತಿಸಲಾಗಿದೆ. ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಜ್ವಲ್, ಅಪರಿಚಿತ ಮಹಿಳೆಗೆ ಫೋನ್ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಲೈಂಗಿಕ ಕಿರುಕುಳಕ್ಕೆ ಬೇಸತ್ತ ಮಹಿಳೆ ತನ್ನ ಪತಿಗೆ ಹೇಳಿದ್ದಾರೆ. ಮಹಿಳೆಯ ಪತಿ ಸೇರಿದಂತೆ 5 ಮಂದಿ ಯರಗನಹಳ್ಳಿಯಲ್ಲಿರುವ ಯುವಕನ ಮನೆಗೆ ತೆರಳಿ ಗುರುವಾರ ಗಲಾಟೆ ಮಾಡಿದ್ದಾರೆ. ನಂತರ ಶುಕ್ರವಾರ ಹೋಟೆಲ್​ನಿಂದ ಪ್ರಜ್ವಲ್​ನನ್ನ ಕರೆದೊಯ್ಯುವ ಪ್ರಯತ್ನ ಮಾಡಲಾಗಿದೆ.

ಹೋಟೆಲ್ ಯೂನಿಫಾರಮ್​ನಲ್ಲಿದ್ದ ಕಾರಣ ಬಟ್ಟೆ ಬದಲಿಸಿ ಬರುವುದಾಗಿ ಪ್ರಜ್ವಲ್ ತಿಳಿಸಿ, ಹೋಟೆಲ್ ಕಟ್ಟಡದ ತಾರಸಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ ಸೇರಿದಂತೆ 5 ಮಂದಿ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button