Breaking NewsLatestಜಿಲ್ಲಾ ಸುದ್ದಿಮೈಸೂರುರಾಜ್ಯಸುದ್ದಿ
ಬೆಂ-ಮೈಸೂರು ರಸ್ತೆ ಸಂಚಾರ ಬಂದ್

ಮೈಸೂರು : ವೀಕೆಂಡ್ಗಾಗಿ ಮೈಸೂರು ಕಡೆ ಹೋಗೋರು ಗಮನಿಸಿಲೇ ಬೇಕಾದ ಸುದ್ದಿ ಇದಾಗಿದೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮಂಡ್ಯ ದ ಬೂದನೂರು ಕೆರೆ ಒಡೆದು ಅವಾಂತರ ಸೃಷ್ಟಿಸಿದೆ. ರಾಷ್ಟೀಯ ಹೆದ್ದಾರಿಗೆ ನೀರು ನುಗ್ಗಿರೋದ್ರಿಂದ ಬೆಂಗಳೂರು- ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ಏರುಪೇರಾಗಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಹಿನ್ನೆಲೆ ಮಂಡ್ಯ ದ ಬೂದನೂರು ಕೆರೆ ಒಡೆದು ಹೋಗಿದೆ. ಹೀಗಾಗಿ ವಾಹನ ಸವಾರರು ಪರ್ಯಾಯ ಮಾರ್ಗದ ಮೂಲಕ ಸಂಚಾರ ಮಾಡಬೇಕಾಗಿದೆ. ಇಲ್ಲವಾದಲ್ಲಿ ವಾಹನ ಸವಾರರು ಮಾರ್ಗದಲ್ಲಿ ಹರಸಾಹಸ ಪಡಬೇಕಾಗಿದೆ ಸುಮಾರು 2 ಕಿ.ಲೋ ಮೀಟರ್ ವರಗೆ ರಸ್ತೆ ತುಂಬೆಲ್ಲ ನೀರು ಹರಿಯುತ್ತಿದೆ.
ಬೆಂಗಳೂರು ಮೈಸೂರು ವಾಹನ ಸಂಚಾರಕೆ ಪರ್ಯಾಯ ಮಾರ್ಗ ಒದಗಿಸಲಾಗಿದೆ. ಮೈಸೂರಿಗೆ ಹೋಗುರು ಮದ್ದೂರು ಕೆ.ಎಂ ದೊಡ್ಡಿ ಮೂಲಕ ಮೈಸೂರಿಗೆ ತಲುಪಬಹುದು. ಮೈಸೂರಿನಿಂದ ಬೆಂಗಳೂರಿಗೆ ಬರೋರು ಮಳವಳ್ಳಿ ಮದ್ದೂರು ಮೂಲಕ ಬೆಂಗಳುರ ಪ್ರವೇಶಿಸಬೇಕು
