ಜಿಲ್ಲಾ ಸುದ್ದಿ
ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿಯಿಂದ ಆಕ್ಸಿಜನ್ ಬಸ್ ಲೋಕಾರ್ಪಣೆ

ಬೆಳಗಾವಿ: ಕೋವಿಡ್ ಸಾಂಕ್ರಾಮಿಕ ವಿರುದ್ಧ ಹೋರಾಟದಲ್ಲಿ ರಾಜ್ಯ ಸಾರಿಗೆ ಬಸ್ಗಳನ್ನೇ ಐಸಿಯು ಆಗಿ ಪರಿವರ್ತಿಸಿರುವ ಸಾರಿಗೆ ಇಲಾಖೆಯ ಬೆಳಗಾವಿ ವಿಭಾಗದ ಒಂದು ಬಸ್ಗೆ ಇಂದು ಮುಖ್ಯಮಂತ್ರಿ ಹಸಿರು ನಿಶಾನೆ ತೋರಿದರು.
ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಈ ಬಸ್ ನಲ್ಲಿ 4 ಹಾಸಿಗೆಯ ಆಂಬುಲೆನ್ಸ್ ಆಗಿ ಪರಿವರ್ತಿಸಲಾಗಿದ್ದು,ಪ್ರತಿಯೊಂದು ಬೆಡ್ ಗೂ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಮಾನಿಟರ್ ( ಬಿ.ಪಿ, ಆಕ್ಸಿಜನ್ ಪ್ರಮಾಣ, ಇ.ಸಿ.ಜಿ, ತಾಪಮಾನ) ಐ.ವಿ. ವ್ಯವಸ್ಥೆವೆಂಟಿಲೇಟರ್ ಅಳವಡಿಸಲು ಸೌಲಭ್ಯ, ಸೇರಿದಂತೆ ತುರ್ತು ಔಷಧಿ ವ್ಯವಸ್ಥೆ ಹಾಗೂ ಜನರೇಟರ್ ವ್ಯವಸ್ಥೆಯನ್ನ ಅಳವಡಿಸಲಾಗಿದೆ, ಅಂದಾಜು ರೂ.10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ.




