ಜಿಲ್ಲಾ ಸುದ್ದಿದಾವಣಗೆರೆ

ಮೋದಿ ವರ್ಚಸ್ಸು ವಿಶ್ವಾದ್ಯಂತ ಇದೆ: ಸಿಎಂ ಬೊಮ್ಮಾಯಿ

ದಾವಣಗೆರೆ: ರಾಜ್ಯದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳ ಶುಲ್ಕ ಜಾಸ್ತಿಯಾಗಿದೆ. ಕಡಿಮೆಗೊಳಿಸುವ ಸಂಬಂಧ ಈಗಾಗಲೇ ಚರ್ಚೆ ನಡೆಸಲಾಗಿದೆ. ಈ ಸಂಬಂಧ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ತೆಗದುಕೊಳ್ಳಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು‌.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೆಡಿಕಲ್‌ ಕಾಲೇಜುಗಳ ಶುಲ್ಕ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಸೀಟುಗಳು ಕಡಿಮೆ ಇವೆ. ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಶುಲ್ಕ ಹೆಚ್ಚಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಮ್ಯಾನೇಜ್ ಮೆಂಟ್ ಹಾಗೂ ಎನ್ ಆರ್ ಐ ಕೋಟಾದಡಿ ಸೀಟು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶುಲ್ಕ ಜಾಸ್ತಿಯಾಗಿ ಬೇಡಿಕೆ ಹೆಚ್ಚಿದೆ ಎಂದರು.

ನರೇಂದ್ರ ಮೋದಿಯವರ ವರ್ಚಸ್ಸು ವಿಶ್ವಾದ್ಯಂತ ಇದೆ. ಸಾಮಾನ್ಯವಾಗಿ ಯುದ್ಧಭೂಮಿಯಲ್ಲಿ ಸೈನಿಕರ ಮೃತದೇಹ ತರುವುದೇ ಕಷ್ಟ. ಅಂತಹುದರಲ್ಲಿ ಯುದ್ಧ ಭೂಮಿಯಿಂದ ನವೀನ್‌ ಮೃತದೇಹ ತರಲು ಮೋದಿಯವರ ಭಗೀರಥ ಪ್ರಯತ್ನವೇ ಕಾರಣ. ಯುದ್ಧ ಈಗಲೂ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ನವೀನ್ ಒಬ್ಬನೇ ನಮ್ಮ ರಾಜ್ಯದ ವಿದ್ಯಾರ್ಥಿ ಮೃತಪಟ್ಟಿರುವುದು. ಆಪರೇಷನ್ ಗಂಗಾ ಆರಂಭವಾಗುವ ಮುನ್ನ 62 ಜನರು ಬಂದಿದ್ದರು. ಅಮೇರಿಕಾ ಕೂಡ ತನ್ನ ದೇಶದ ನಾಗರಿಕರನ್ನು ಬಿಟ್ಟಿದೆ. ಉಕ್ರೇನ್, ರಷ್ಯಾ ನಡುವೆ ಯುದ್ಧ ನಡೆದರೂ ನಿರಂತರವಾಗಿ ಮಕ್ಕಳನ್ನು ಕರೆತರಲು ಎಲ್ಲಾ ರೀತಿಯ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ. ಉಕ್ರೇನ್ ನಿಂದ ಗಡಿ ಪ್ರದೇಶದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಿ ಕಳುಹಿಸಿದ್ದಾರೆ. ಇದು ಮೋದಿಯವರ ಶಕ್ತಿಗೆ ನಿದರ್ಶನ ಎಂದು ಹೇಳಿದರು.

ನವೀನ್ ಸಾವನ್ನಪ್ಪಿದಾಗ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ್ದರು. ನವೀನ್ ಪೋಷಕರಿಗೂ ಕರೆ ಮಾಡಿ ಮಾತನಾಡಿದ್ದಾರೆ. ನಾನೂ ಸಹ ಮಾತನಾಡಿದ್ದೇನೆ. ಭಾರತೀಯ ರಾಯಭಾರಿಗಳು ಅಲ್ಲಿನ ಸರ್ಕಾರದ ಜೊತೆಗೆ ಮಾತನಾಡಿ ಮೃತದೇಹ ತರಲು ಸಹಕರಿಸಿದ್ದಾರೆ. ಮೃತದೇಹ ಸ್ವಗ್ರಾಮಕ್ಕೆ ಬರಲು ಎಲ್ಲಾ ವಿಮಾನ ನಿಲ್ದಾಣದಲ್ಲಿ ಸಹಕಾರ ನೀಡಿದ್ದಾರೆ. ವಿದೇಶಾಂಗ ಇಲಾಖೆಯು ಸಹಕಾರ ನೀಡಿದೆ. ವಿದೇಶಾಂಗ ಸಚಿವರ ಜೊತೆ ಮಾತನಾಡಿದ್ದೆ. ನಿರಂತರ ಸಂಪರ್ಕದಲ್ಲಿದ್ದೆವು. ವಿಶೇಷವಾಗಿ ವಿದೇಶಾಂಗ ಸಚಿವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಮೃತದೇಹ ರಕ್ಷಣೆ ಮಾಡಿಟ್ಟಿದ್ದರು. ವೆಸ್ಟರ್ನ್ ಭಾಗದಲ್ಲಿ ಈಗಲೂ ಕೂಡ ಯುದ್ಧ ನಡೆಯುತ್ತಿದೆ ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button