ಕಲಬುರ್ಗಿಜಿಲ್ಲಾ ಸುದ್ದಿರಾಜಕೀಯ
ಕಲಬುರಗಿ ಪಾಲಿಕೆ ಅಧಿಕಾರ ವಿಚಾರದಲ್ಲಿ ಫೈನಲ್ಗೆ ಬಂದಿದ್ದೇವೆ, ಗೆದ್ದೆ ಗೆಲ್ತೆವೆ: ಸಚಿವ ಮುರುಗೇಶ್ ನಿರಾಣಿ

ಕಲಬುರಗಿ: ಪಾಲಿಕೆ ಅಧಿಕಾರ ಹಿಡಿಯುವ ವಿಷಯದಲ್ಲಿ ಈಗಾಗಲೇ ಫೈನಲ್ ಗೆ ಬಂದು ತಲುಪಿದ್ದೇವೆ. ನಾವೇ ಗೆದ್ದೆ ಗೆಲ್ಲುತ್ತೇವೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನೀರಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮೊದಲ ಬಾರಿಗೆ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದೆ. ಜೆಡಿಎಸ್ ಜೊತೆ ಸೇರಿ ಅಧಿಕಾರ ರಚನೆ ಮಾಡಬೇಕಂತ ಯೋಚನೆ ಮಾಡಲಾಗಿದೆ. ಇಲ್ಲಿವರೆಗೆ ಕುಮಾರಸ್ವಾಮಿ ಅವರಿಂದ ಯಾವುದೆ ಆಸ್ವಾಸನೆ ಸಿಕ್ಕಿಲ್ಲ, ಕುಮಾರಸ್ವಾಮಿ ಬಿಜೆಪಿಗೆ ಬೆಂಬಲಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದರು.
ಅದಾಗ್ಯೂ ಯಾವ ರೀತಿ ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ. ನಮ್ಮ ನಡೆ ಹೇಗಿರುತ್ತೆ ಅನ್ನೋದು ಕಾಯ್ದು ನೋಡಿ. ಫೈನಲ್ ಗೆ ಬಂದವರು ನಾವು ಗೆದ್ದೆ ಗೆಲ್ತೆವೆ ಅಂತ ವಿಶ್ವಾಸ ವ್ಯಕ್ತ ಪಡಿಸಿದರು.




