ಜಿಲ್ಲಾ ಸುದ್ದಿಬಾಗಲಕೋಟೆ

ಕೃಷ್ಣಾ ನದಿಯಲ್ಲಿ ಪ್ರವಾಹ : ನೀರಲ್ಲಿ ರೈತರು ಜಾನುವಾರು ಸ್ಥಳಾಂತರಕ್ಕೆ ಹರಸಾಹಸ

ಬಾಗಲಕೋಟೆ: ಮಹಾರಾಷ್ಟ್ರ ಬೆಳಗಾವಿಯಲ್ಲಿ ಮಳೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು. ಎದೆ ಮಟ್ಟದ ನದಿ ನೀರಿನಲ್ಲಿ ರೈತರು ಜಾನುವಾರು ರಕ್ಷಣೆ ಮಾಡಲು ಹರಸಾಹಸಪಡುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ, ಮುತ್ತೂರು ನಡುಗಡ್ಡೆ ರೈತರು ಪರದಾಡುತ್ತಿದ್ದಾರೆ.ಎದೆ ಮಟ್ಟದ ನೀರಲ್ಲಿ ಎಮ್ಮೆನ್ನು ಹೊಡೆದುಕೊಂಡು ಸುರಕ್ಷಿತ ಸ್ಥಳದತ್ತ ರೈತರು ಬರುತ್ತಿದ್ದಾರೆ. ಮುತ್ತೂರು ನಡುಗಡ್ಡೆಯಿಂದ ಮುತ್ತೂರು ಗ್ರಾಮಕ್ಕೆ ಜಾನುವಾರುಗಳನ್ನು ಸ್ಥಳಾಂತರ ಮಾಡುತ್ತಿದ್ದು. ತುಬಚಿ, ಮುತ್ತೂರು ನಡುಗಡ್ಡೆಗಳ ತೋಟದಲ್ಲಿ ನೂರಾರು ಕುಟುಂಬಗಳು ವಾಸವಿದ್ದು, ಇದೀಗ ಜಾನುವಾರುಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ.

ಕಳೆದ ಮೂರು ವರ್ಷಗಳಿಂದ ಸತತವಾಗಿ ಕೃಷ್ಣಾ ನದಿ ತೀರದ ಗ್ರಾಮಸ್ಥರು ಪ್ರವಾಹವನ್ನು ಎದುರಿಸುತ್ತಿದ್ದಾರೆ. ಮಹಾರಾಷ್ಟ್ರ, ಬೆಳಗಾವಿಯಲ್ಲಿ ನಿರಂತರ ಮಳೆ ಶುರುವಾದರೇ ಬಾಗಲಕೋಟೆ ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ತೀರದ ಗ್ರಾಮಸ್ಥರಿಗೆ ಪ್ರವಾಹ ಆತಂಕ ಎದುರಾಗುತ್ತದೆ. ಈಗಾಗಲೇ ಜಿಲ್ಲಾಡಳಿತ ಕೂಡಾ ನದಿ ತೀರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button