ಸಿದ್ದರಾಮಯ್ಯ ಯಾವ ದೊಣ್ಣೆ ನಾಯಕ: ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

ಕಲಬುರಗಿ: Who is this ಸಿದ್ದರಾಮಯ್ಯ? ನಮ್ಮ ಪಕ್ಷದಲ್ಲಿ ಯಾರನ್ನು ಅಭ್ಯರ್ಥಿ ಹಾಕಬೇಕು ನನಗೆ ಗೊತ್ತು ಅದನ್ನ ಹೇಳುವುದಕ್ಕೆ ಸಿದ್ದರಾಮಯ್ಯ ಯಾವ ದೊಣ್ಣೆ ನಾಯಕ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಇವರಿಂದ ಅರ್ಜಿ ತೆಗೆದುಕೊಂಡು ನಾನು ಅಭ್ಯರ್ಥಿ ಫೈನಲ್ ಮಾಡಬೇಕಾ? ಸಿದ್ದರಾಮಯ್ಯ ನನ್ನ ಪಕ್ಷದ ಮುಖಂಡನಾ ನಮ್ಮ ಪಕ್ಷದ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡೋಕೆ. ಮುಸ್ಲಿಂ ಬಾಂಧವರನ್ನ ನಮ್ಮಿಂದ ದೂರ ಮಾಡಬೇಕು ಅಂತಾ ಅಂದುಕೊಂಡಿದ್ದಾರೆ. ಜೆಡಿಎಸ್ ಬಿಜೆಪಿಯ ಬಿ ಟೀಮ್ ಅಂತಾ ಹೇಳಿಯೇ ಬಿಜೆಪಿಗೆ 105 ಸೀಟು ಬಂದಿರೋದು. ನಾನ್ಯಾಕೆ ಬಿಜೆಪಿಗೆ ಗೆಲ್ಲಿಸೋದಕ್ಕೆ ಹೋಗಲಿ ನನ್ನ ಪಕ್ಷ ಇಲ್ವಾ. ಮುಸ್ಲಿಂ ಬಂಧುಗಳಿಗೆ ಕಾಂಗ್ರೆಸ್ ಕೊಡುಗೆ ಏನು?, ದೇವೆಗೌಡರಿಂದ ಮುಸ್ಲಿಂ ಕಮ್ಯೂನಿಟಿಗೆ ರಿಸರ್ವೆಷನ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಪದೇ ಪದೇ ಈ ರೀತಿಯಾಗಿ ಹೇಳಿದ್ರೆ ಮುಂದೆ ಮುಸ್ಲಿಂ ಸಮಾಜ ಕಾಂಗ್ರೆಸ್ ವಿರುದ್ದ ತಿರುಗಿ ಬಿಳುತ್ತೆ ಹುಷಾರ್ ಅಂತ ಎಚ್ಚರಿಸಿದ ಅವರು, ನಾನು ಪದವಿಧರರನ್ನ ಅಖಾಡಕ್ಕೆ ಇಳಿಸಿದ್ದಿನಿ, ಹೆಬ್ಬಟ್ಟು ಕ್ಯಾಂಡಿಡೆಟ್ ಹಾಕಿಲ್ಲ, ನಮ್ಮ ಬಗ್ಗೆ ಚರ್ಚೆ ಮಾಡುದರ ಬಗ್ಗೆ ನಿಮಗೆ ಯಾವ ಅರ್ಹತೆ ಇದೆ. ನಮ್ಮ ಬಗ್ಗೆ ಚರ್ಚೆ ಮಾಡೋದನ್ನ ಬಿಟ್ಟು ಬಿಜೆಪಿ ಓಟಕ್ಕೆ ಬ್ರೇಕ್ ಹಾಕೋದನ್ನ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗಿನ ಆರ್ಎಸ್ಎಸ್ ಈಗಿನ ಆರ್ಎಸ್ಎಸ್:
ಇದೆ ವೇಳೆ ದೇವೆಗೌಡರು ಆರ್ ಎಸ್ ಎಸ್ ಬಗ್ಗೆ ಹೊಗಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರನಿಂದ ನನಗೆ ಸರ್ಟೀಪಿಕೆಟ್ ಬೇಕಾಗಿಲ್ಲ. ದೇವೆಗೌಡರು ಸ್ವಾತಂತ್ರ್ಯ ಸಂಧರ್ಭದಲ್ಲಿ ಆರ್ ಎಸ್ ಎಸ್ ಬಗ್ಗೆ ಹೇಳಿರೋದು. ಈವಾಗಿನ ಆರ್ ಎಸ್ ಎಸ್ ಬಗ್ಗೆ ಹೇಳಿಲ್ಲ. ಬಿಜೆಪಿಯವರು ಸ್ವಾತಂತ್ರ್ಯ ಸಂದರ್ಭದಲ್ಲಿ ಕಾಂಗ್ರೆಸ್ ಬೇರೆ ಈಗಿನ ಕಾಂಗ್ರೆಸ್ ಬೇರೆ ಅಂತಾ ಹೇಳ್ತಾರೆ. ಹಾಗೆ ಅಂದಿನ ಆರ್ ಎಸ್ ಎಸ್ ಬೇರೆ ಇಂದಿನ ಆರ್ ಎಸ್ ಎಸ್ ಬೇರೆಯಾಗಿದೆ. ಆರ್ ಎಸ್ ಎಸ್ ಕಪಿಮುಷ್ಟಿಯಲ್ಲಿ ಈ ದೇಶದ ಆಡಳಿತ ನಡೆಯುತ್ತಿರೋದು ಹೀಗೆ ಮುಂದುವರೆದರೆ ದೇಶ ಹಾಳಾಗಲಿದೆ. ನಾನು ಸಿದ್ದರಾಮಯ್ಯ ಹಾಗೆ ಯಾವುದೋ ಹೆಂಡದ ಅಂಗಡಿ ಮುಂದೆ ಕೂತು ಮಾತಾಡೋದಿಲ್ಲ. ವಾಸ್ತವ ಅಂಶ ಗಮನಕ್ಕೆ ಬಂದಿರೋದ್ರ ಬಗ್ಗೆ ಜನರ ಮುಂದೆ ಇಡ್ತೇನೆ ಎಂದರು.
ಉಪ ಚುನಾವಣೆ ಸಮಯದಲ್ಲಿ ಐಟಿ ದಾಳಿ
ಇದೆ ವೇಳೆ ಯಡಿಯೂರಪ್ಪ , ವಿಜಯೇಂದ್ರ ಆತ್ಮಿಯರ ಮನೆಯ ಮೇಲಿನ ದಾಳಿ ವಿಚಾರದ ಕುರಿತು ಮಾತನಾಡಿದ ಅವರು, ಐಟಿ ದಾಳಿ ಬಗ್ಗೆ ನಾನು ಯಾವುದೆ ಪ್ರತಿಕ್ರಿಯೆ ಇಲ್ಲ ಬಹಳ ದಿವಸಗಳ ನಂತರ, ಉಪ ಚುನಾವಣೆ ಸಮಯದಲ್ಲಿ ಐಟಿ ದಾಳಿ ನಡೆದಿದೆ. ಐಟಿಯವರ ಮಾಹಿತಿ ಮೇರೆಗೆ ದಾಳಿ ಮಾಡಿರಬೇಕು. ಬಿಜೆಪಿಯ ಆಂತರಿಕ ವಿಷಯಗಳ ಸಮಸ್ಯೆಗಳ ಮೂಲಕ ಅವರ ಹಿಡಿದತದಲ್ಲಿ ಇಟ್ಟುಕೊಳ್ಳಲು ದಾಳಿ ಮಾಡಿಸಿರಬಹುದು ಎಂದು ಹೇಳಿದರು.




