ಚಿಕ್ಕಮಗಳೂರು
ಹೇಮಾವತಿ ನದಿ ಬಳಿಯಿದ್ದ ಅನಾಥ ಮಹಿಳೆಯ ರಕ್ಷಣೆ

ಚಿಕ್ಕಮಗಳೂರು: ಹೇಮಾವತಿ ನದಿಯ ದಡದಲ್ಲಿ ಅಪರಿಚಿತ ಮಹಿಳೆಯೋರ್ವರು ಅನಾಥವಾಗಿ, ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದನ್ನು ಗಮನಿಸಿದ ಸಮೀಪದ ಪಲ್ಗುಣಿ ಗ್ರಾಮಸ್ಥರು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದರು. ಸಂಬಂಧಿಕರು ಯಾರಾದರೂ ಇದ್ದಲ್ಲಿ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಬರಬೇಕಾಗಿ ಕೋರಲಾಗಿದೆ.
ಮಹಿಳೆಗೆ ಆರೋಗ್ಯ ಆರೈಕೆ ದೃಷ್ಟಿಯಿಂದ ಫಲ್ಗುಣಿ ಗ್ರಾಮಸ್ಥರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಸಮಾಜ ಸೇವಕ ಆರಿಫ್ ಬಣಕಲ್ ಸೇರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ತೋರಿದ್ದಾರೆ.




