ಚಿಕ್ಕಮಗಳೂರು
ಕಾಡಾನೆ ಹಾವಳಿ; ಅಪಾರ ಬೆಳೆನಷ್ಟ

ಚಿಕ್ಕಮಗಳೂರು: ಚಾರ್ಮಾಡಿ ಕಣಿವೆ ಭಾಗದಲ್ಲಿರುವ ಆಲೇಖಾನ್ ಹೊರಟ್ಟಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳು ದಾಂಗುಡಿಯಿಟ್ಟು ತೋಟಗಳಲ್ಲಿ ಸವಾರಿ ನಡೆಸಿವೆ.
ಕಾಫಿ, ಅಡಿಕೆ, ಬಾಳೆ ಮೊದಲಾದ ಬೆಳೆಗಳನ್ನು ನಾಶಮಾಡಿವೆ.
ಅಲೆಕಾನ್ ಹೊರಟ್ಟಿ ಗ್ರಾಮದ ಸುರೇಶ್ ಗೌಡ ಪ್ರಕಾಶ್ ಗೌಡ ನಾರಾಯಣಗೌಡ ಸಂದೀಪ್ ನಂಜುಂಡೇಗೌಡ ರಾಮೇಗೌಡ ಮೊದಲಾದವರ ತೋಟದಲ್ಲಿ 20ಕ್ಕೂ ಹೆಚ್ಚು ಆನೆಗಳ ಠಿಕಾಣಿ ಅರಣ್ಯಾಧಿಕಾರಿಗಳು ಪಟಾಕಿ ಸಿಡಿಸಿ ಕಾಡಿಗೆ ಓಡಿಸಿದರು.




