ಚಿಕ್ಕಮಗಳೂರು
ನಿಯಮಬಾಹಿರವಾಗಿ ಹಕ್ಕುಪತ್ರ ವಿತರಣೆ: ಶೃಂಗೇರಿ ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಕಂದಾಯ ಇಲಾಖೆಗೆ ಪತ್ರ

ಚಿಕ್ಕಮಗಳೂರು: ನಿಯಮಬಾಹಿರವಾಗಿ ಹಕ್ಕುಪತ್ರಗಳನ್ನು ವಿತರಿಸುತ್ತಿರುವ ಆರೋಪವಿರುವ ಶೃಂಗೇರಿ ತಹಸೀಲ್ದಾರ್ ವಿರುದ್ಧ ಸೂಕ್ತ ಕ್ರಮಕ್ಕೆ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಕಂದಾಯ ಸಚಿವರಿಗೆ ಪತ್ರ ಬರೆದಿದ್ದಾರೆ.
ಶಾಸಕ ಟಿ ಡಿ ರಾಜೇಗೌಡ ಮತ್ತು ಎಸ್ ಎಲ್ ಭೋಜೇಗೌಡ ಪತ್ರ ಬರೆದು ಅವರ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಕಂದಾಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಪತ್ರ ಬರೆದಿದ್ದಾರೆ.




