Breaking NewsLatestರಾಜ್ಯಸುದ್ದಿ

ಎರಡನೇ ಸಲ ಅಪಘಾತಕ್ಕೆ ಒಳಗಾದ ವಂದೇ ಭಾರತ್ ಎಕ್ಸ್​​ಪ್ರೆಸ್​​!

ಗುಜರಾತ್: ವಾರದ ಹಿಂದಷ್ಟೇ ಆರಂಭಗೊಂಡಿರುವ ವಂದೇ ಭಾರತ್ ಎಕ್ಸ್​ಪ್ರೆಸ್​ ಅಷ್ಟರಲ್ಲೇ ಎರಡು ಸಲ ಅವಘಡಕ್ಕೆ ಒಳಗಾಗಿದೆ. ಅದೃಷ್ಟವಶಾತ್ ಅಂಥ ಯಾವುದೇ ತೊಂದರೆ ಆಗದೆ, ಸಣ್ಣಪುಟ್ಟ ಸಮಸ್ಯೆಗಳೊಂದಿಗೆ ಪಾರಾಗಿದೆ.

ಗುಜರಾತ್ ಮತ್ತು ಮುಂಬೈ ಸೆಂಟ್ರಲ್ ಮಧ್ಯೆ ಸಂಚರಿಸುವ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಅ.6ರಂದು ಬೆಳಗ್ಗೆ 11.15ರ ಸುಮಾರಿಗೆ ಅಪಘಾತಕ್ಕೀಡಾಗಿತ್ತು.

ಎಮ್ಮೆಗಳ ಹಿಂಡು ರೈಲ್ವೇ ಹಳಿಯ ಮೇಲೆ ಅಡ್ಡ ಬಂದುದರಿಂದ ಈ ಅಪಘಾತ ಸಂಭವಿಸಿತ್ತು.

ರೈಲು ಅತಿವೇಗದಲ್ಲಿ ಇಲ್ಲದ್ದರಿಂದ ದೊಡ್ಡಮಟ್ಟದ ಹಾನಿಯಾಗಿರಲಿಲ್ಲ. ರೈಲಿನ ಮುಂಭಾಕ್ಕೆ ಮಾತ್ರ ಹಾನಿಯಾಗಿತ್ತು. ಆ ಭಾಗವನ್ನು ಮುಂಬೈ ಸೆಂಟ್ರಲ್ ಡಿಪೋದಲ್ಲಿ ಸರಿಪಡಿಸಿ, ಅಪಘಾತವಾದ 24 ಗಂಟೆಯಲ್ಲಿ ಸಂಚಾರಕ್ಕೆ ಸಿದ್ಧವಾಗಿತ್ತು. ಆದರೆ ಮತ್ತೆ ಪುನಃ ಅಂಥದ್ದೇ ಅವಘಡಕ್ಕೆ ಒಳಗಾಗಿದೆ.

ವಂದೇ ಭಾರತ್ ಎಕ್ಸ್​ಪ್ರೆಸ್​ ಶುಕ್ರವಾರ ಗುಜರಾತ್​ನ ಆನಂದ್ ಸ್ಟೇಷನ್ ಬಳಿ ದನಕ್ಕೆ ಡಿಕ್ಕಿ ಹೊಡೆದಿದೆ. ಈ ರೈಲಿನ ಮೂತಿಗೆ ಸಣ್ಣ ಹಾನಿ ಆಗಿದ್ದು, ದೊಡ್ಡ ಸಮಸ್ಯೆ ಏನೂ ಆಗಿಲ್ಲ.

ಪ್ರಧಾನಿ ನರೇಂದ್ರ ಮೋದಿ ಸೆ.30ರಂದು ವಂದೇ ಭಾರತ್ ಎಕ್ಸ್​ಪ್ರೆಸ್​ಗೆ ಚಾಲನೆ ನೀಡಿದ್ದರು. ಈ ರೈಲು ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಜತೆಗೆ ಸುಧಾರಿತ ವೇಗವರ್ಧನೆ ಹಾಗೂ ಬ್ರೇಕಿಂಗ್ ಸಾಮರ್ಥ್ಯವನ್ನೂ ಒಳಗೊಂಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button