Breaking NewsLatestರಾಷ್ಟ್ರೀಯಸುದ್ದಿ

Lucknow; ಮಹಿಳಾ ಕಾನ್ಸ್​​ಟೇಬಲ್​​​​ ಶವ ಪತ್ತೆ ಪ್ರಕರಣ : ತಹಶೀಲ್ದಾರ್ ಸೇರಿ ಮೂವರ ಬಂಧನ​

ಲಖನೌ : ಮಹಿಳಾ ಕಾನ್ಸ್​​ಟೇಬಲ್​​​​​ ಒಬ್ಬರ ಶವ ಚರಂಡಿಯಲ್ಲಿ ಪತ್ತೆಯಾಗಿ ಜನರನ್ನು ಬೆಚ್ಚಿಬೀಳಿಸಿದೆ. ಲಖನೌದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ತಹಶೀಲ್ದಾರ್​, ಅವರ ಪತ್ನಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪೋಲೀಸರು ಪ್ರಕಾರ, ಪದ್ಮೇಶ್​​ 5 ವರ್ಷಗಳ ಹಿಂದೆ ಮೃತ ಕಾನ್ಸ್​​​ಟೇಬಲ್​​​​ ರುಚಿ ಸಿಂಗ್​​​​​​​ ಅವರೊಂದಿಗೆ ಫೆಸ್​​ಬುಕ್​​​ನಲ್ಲಿ ಸ್ನೇಹ ಬೆಳೆಸಿದ್ದರು. ತಹಶೀಲ್ದಾರ್​​ ಪದ್ಮಶ್ ಶ್ರೀವಾಸ್ತವ್​​​​​ ವಿವಾಹದ ಬಳಿಉಕ ರುಚಿ ಸಿಂಗ್​​​​​​​​​​​​​​​​​ ಜೊತೆ ಸಂಬಂಧ ಹೊಂದಿದ್ದರು.

ಈ ನಡುವೆ ಪದ್ಮಶ್​​​​​​​ ತನ್ನ ಪತ್ನಿಗೆ ವಿಚ್ಚೇಧನ ನೀಡಿ, ತನನ್ನು ವಿವಾಹಗುವಂತೆ ಒತ್ತಡ ಹೇರುತ್ತಿದ್ದಳು. ರುಚಿ ಸಿಂಗ್​​​​ ಕೊನೆಯ ಕರೆ ತಹಶೀಲ್ದಾರ್​​​ ಪದ್ಮೇಶ್​​ ಮಾಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆ ವಿಚಾರಣೆ ನಡೆಸಿದಾಗ ಕೊಲೆ ಮಾಡಿ ಚರಂಡಿಗೆ ಎಸೆದಿರುವುದಾಗಿ ತಪ್ಪು ಮಾಡಿರುವುದಾಗಿ ಒಪ್ಪಿಗೊಂಡಿದ್ದಾರೆ ಎಂದು ಪೂರ್ವ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಿಳಾ ಕಾನ್ಸ್​​ಟೇಬಲ್​​​​​​ ಹತ್ಯೆ ಪ್ರಕರಣದಲ್ಲಿ ತಹಶೀಲ್ದಾರ್ ಪದ್ಮೇಶ್​ ಹಾಗೂ ಅವರ ಪತ್ನಿ ಪ್ರಗತಿ ಶ್ರೀವಾಸ್ತವ್​​​​​ ಮತ್ತು ಇನ್ನೊರ್ವನನ್ನು ಪೊಲೀಸರು ಬಂಧಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button