Breaking NewsLatestರಾಷ್ಟ್ರೀಯಸುದ್ದಿ

ತೆಲಂಗಾಣದ ಬಿಜೆಪಿ ನಾಯಕ, ರಾಜ್ಯಸಭಾ ಮಾಜಿ ಸಂಸದ ಆನಂದ್ ಭಾಸ್ಕರ್ ರಾಜೀನಾಮೆ

ಹೈದರಾಬಾದ್‌: ತೆಲಂಗಾಣದ ಬಿಜೆಪಿ ನಾಯಕ, ಮಾಜಿ ರಾಜ್ಯಸಭಾ ಸಂಸದ ಆನಂದ್ ಭಾಸ್ಕರ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ಆನಂದ್ ಭಾಸ್ಕರ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

‘ಕಳೆದ 4 ವರ್ಷಗಳಿಂದ ಕೇಂದ್ರ ಮಟ್ಟದಲ್ಲಿ ನನ್ನನ್ನು ನಿರ್ಲಕ್ಷಿಸಲಾಗಿದ್ದು, ಅವಮಾನಿಸಲಾಗಿದೆ’ ಎಂದು ಆನಂದ್ ಭಾಸ್ಕರ್ ಆರೋಪಿಸಿದ್ದಾರೆ.

ರಾಪೋಲು ಆನಂದ ಭಾಸ್ಕರ್ ಅವರು ಭಾನುವಾರ ಭಾರತ್‌ ರಾಷ್ಟ್ರ ಸಮಿತಿ ಅಧ್ಯಕ್ಷ (ಬಿಆರ್‌ಎಸ್‌), ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿ ಆಡಳಿತ ಪಕ್ಷಕ್ಕೆ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button