
ನವದೆಹಲಿ: ಆಪರೇಷನ್ ಗಂಗಾ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಹೊತ್ತ ಭಾರತೀಯ ವಾಯಪಡೆಯ ಮೂರು ಸಿ-17 ವಿಮಾನಗಳು ದೆಹಲಿ ಬಳಿಯ ಹಿಂಡನ್ ವಾಯುನೆಲೆಗೆ ಗುರುವಾರ ಮುಂಜಾನೆ ಆಗಮಿಸಿವೆ.
ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ ನಿಂದ 200 ಭಾರತೀಯರನ್ನು ಹೊತ್ತ ಮೊದಲ ಭಾರತೀಯ ವಾಯುಪಡೆಯ ಸ್ಥಳಾಂತರಿಸುವ ವಿಮಾನವು ಗುರುವಾರ ಮುಂಜಾನೆ ಹೊಸದಿಲ್ಲಿ ಬಳಿಯ ಹಿಂಡನ್ ವಾಯುನೆಲೆಗೆ ಆಗಮಿಸಿತು.
ಹಂಗೇರಿಯ ಬುಡಾಫೆಸ್ಟ್ ನಿಂದ 210 ಭಾರತೀಯ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮತ್ತೊಂದು ಭಾರತೀಯ ವಾಯಪಡೆಯ ಸಿ-17 ವಿಮಾನವು ಹಿಂಡನ್ ಏರ್ ಬೇಸ್ ನಲ್ಲಿ ಇಳಿಯಿತು. 208 ಭಾರತೀಯ ಪ್ರಜೆಗಳನ್ನು ಹೊತ್ತ 3ನೇ ಐಎಎಫ್ ವಿಮಾನ ಪೋಲೆಂಡ್ ನಿಂದ ತಲುಪಿದೆ.
ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರು ಆಗಮಿಸಿದ ಭಾರತೀಯ ನಾಗರಿಕರನ್ನು ಬರಮಾಡಿಕೊಂಡರು ಮತ್ತು ಅವರೊಂದಿಗೆ ಸಂವಾದ ನಡೆಸಿದರು.
ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಮನೆಗೆ ಕರೆತರುವಲ್ಲಿ ಸರ್ಕಾರದ ಪ್ರಯತ್ನಗಳಿಗೆ ಐಎಎಫ್ ಸಿಬ್ಬಂದಿ ಮತ್ತು ಪೈಲಟ್ ಗಳು ತಮ್ಮ ಸೇವೆ ಮತ್ತು ಬೆಂಬಲಕ್ಕಾಗಿ ಹೆಚ್ಚು ಬಾಧ್ಯತೆ ಹೊಂದಿದ್ದಾರೆ ಎಂದು ಸಚಿವ ಭಟ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
