
ಕೈವ್: ಉಕ್ರೇನ್ ನಿಂದ ರುಮೇನಿಯಾ ಮತ್ತು ಹಂಗೇರಿ ಮೂಲಕ ಭಾರತೀಯರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಭಾರತ ಹೇಳಿದೆ. ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಭಾರತೀಯ ನಾಗರಿಕರಿಗಾಗಿ ನೆರೆಯ ದೇಶಗಳೊಂದಿಗೆ ಹಚ್ಚಿನ ಗಡಿಗಳನ್ನು ತೆರೆಯಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಕರ್ಫ್ಯೂ ಹಿಂತೆಗೆದುಕೊಂಡಾಗ ಮತ್ತು ಆಯಾ ನೆರೆಹೊರೆಯಲ್ಲಿ ಜನರ ಸಾಕಷ್ಟು ಸಂಚಾರವಿದೆ. ಭಾರತೀಯ ಪ್ರಜೆಗಳು ಸಕ್ರಿಯ ಸಂಘರ್ಷದ ಪ್ರದೇಶಗಳಿಂದ ಹೊರಬರಲು ಮತ್ತು ಪಶ್ಚಿಮ ಪ್ರದೇಶಗಳ ಕಡೆಗೆ ಚಲಿಸಲು ಹತ್ತಿರ ರೈಲು ನಿಲ್ದಾಣಗಳನ್ನು ಬಳಸಲು ಸೂಚಿಸಲಾಗಿದೆ.
ರೈಲ್ವೆಯ ಸಾರಿಗೆ ವಿಧಾನವೂ ಕಾರ್ಯಾಚರಣೆ ಮತ್ತು ಸುರಕ್ಷಿತವಾಗಿದೆ ಮತ್ತು ಸಾಮಾನ್ಯ ರೈಲುಗಳಲ್ಲಿ ಟಿಕೆಟ್ ಗಳು ಲಭ್ಯವಿದ್ದರೆ ಮತ್ತು ಅವುಗಳನ್ನು ಬುಕ್ ಮಾಸಬಹುದು ಎಂದೂ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಹೆಚ್ಚುವರಿಯಾಗಿ, ಉಕ್ರೇನಿಯನ್ ರೈಲ್ವೆ ಜನರನ್ನು ಸ್ಥಳಾಂತರಿಸಲು ವಿಶೇಷ ರೈಲುಗಳನ್ನು ಸಹ ಉಚಿತವಾಗಿ ನಿರ್ವಹಿಸುತ್ತಿದೆ. ಮೊದಲು ಬಂದವರಿಗೆ ಮೊದಲ ಸೇವೆ ಆಧಾರದ ಮೇಲೆ ರೈಲ್ವೆ ನಿಲ್ದಾಣದಲ್ಲಿ ಮತ್ತು ಟಿಕೆಟ್ ಗಳ ಅಗತ್ಯವಿಲ್ಲ. ರೈಲುಗಳ ವೇಳಾಪಟ್ಟಿಯನ್ನು ವೆಬ್ ಸೈಟ್ ನಲ್ಲಿ ನೋಡಬಹುದು. www.uz.gov.ua
ರೈಲು ನಿಲ್ದಾಣಗಳಲ್ಲಿ ಡಿಜಿಟಲ್ ಬೋರ್ಡ್ ಗಳನ್ನು ಪರಿಶೀಲಿಸಲು ಜನರಿಗೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಅವುಗಳನ್ನು ಹೆಚ್ಚು ನವೀಕರಿಸಲಾಗಿದೆ ಮತ್ತು ವಿಶ್ವಾಸಾರ್ಹವಾಗಿವೆ. ಜತೆಗೆ ರೈಲ್ವೇ ನಿಲ್ದಾಣಗಳಲ್ಲಿ ನೈಜ ಆಧಾರದ ಮೇಲೆ ಫಲಕಗಳನ್ನು ಹಾಕಲಾಗುತ್ತಿದೆ.
ಉಕ್ರೇನ್ ನಲ್ಲಿರುವ ಭಾರತೀಐ ರಾಯಭಾರ ಕಚೇರಿ ಭಾರತೀಯ ಪ್ರಜೆಗಳಿಗೆ ಗುಂಪುಗಳಲ್ಲಿ ಪ್ರಯಾಣೀಸಲು ಸಲಹೆ ನೀಡಿದೆ ಮತ್ತು ಇತರೆ ಸಹ ಭಾರತೀಯರನ್ನು ಗುರುತಿಸಲು ಮತ್ತು ಅವರೊಂದಿಗೆ ಒಟ್ಟಿಗೆ ಪ್ರಯಾಣಿಸಲು ಸಲಹೆ ನೀಡಿದೆ. ರೈಲು ನಿಲ್ದಾಣಗಳಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗೆ ಆದ್ಯತೆ ನೀಡಲಾಗುತ್ತಿದೆ.
ಉಕ್ರೇನ್ ನಲ್ಲಿರುವ ಭಾರತದ ರಾಯಭಾರ ಕಚೇರಿ, ವಿಶೇಷವಾಗಿ ಉಕ್ರೇನ್ನ ಪೂರ್ವ ಪ್ರದೇಶಗಳಲ್ಲಿ ಅಭಿವೃದ್ಧಿ ಶೀಲ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಭಾರತೀಯ ನಾಗರಿಕರ ಸುರಕ್ಷತೆಯನ್ನು ಕೋರುತ್ತದೆ ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಮನವಿ ಮಾಡಿದೆ.
