Breaking NewsLatestರಾಜಕೀಯರಾಷ್ಟ್ರೀಯಸುದ್ದಿ
ಬಿಜೆಪಿ ನಿಧಿಗೆ ಸಾವಿರ ರೂಪಾಯಿ ದೇಣಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನವಾದ ಇಂದು ಬಿಜೆಪಿ ವಿಶೇಷ ದೇಣಿಗೆ ಶಿಬಿರ ಆರಂಭಿಸಿದ್ದು , ಪ್ರಧಾನಿ ನರೇಂದ್ರ ಮೋದಿ ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ. ದೇಣಿಗೆ ಅಭಿಯಾನ ಬರುವ ಫೆ.11 ವರೆಗೂ ಮುಂದುವರೆಯಲಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. “ಭಾರತೀಯ ಜನತಾ ಪಕ್ಷದ ಪಕ್ಷದ ನಿಧಿಗೆ ನಾನು 1ಸಾವಿರ ರುಪಾಯಿ ದೇಣಿಗೆನೀಡಿದ್ದೇನೆ. ದೇಶಕ್ಕೆ ಮೊದಲ ಆದ್ಯತೆ ನೀಡುವುದು ನಮ್ಮ ಅದರ್ಶ. ನೀವು ನೀಡುವ ದೇಣಿಗೆಯಿಂದ ನಿಸ್ವಾರ್ಥ ಸೇವೆ ಬಲವಾಗಲಿದೆ,. ಬಿಜೆಪಿ ಬಲಪಡಿಸಲು ಸಹಕರಿಸಿ. ಈ ಮೂಲಕ ಭಾರತ ಬಲಿಷ್ಠಗೊಳಿಸಲು ನೆರವಾಗಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಟ್ವೀಟ್ ಮಾಡಿ , ಬಿಜೆಪಿಗೆ ನೀಡುವ ದೇಣಿಗೆಯು ನವ ಭಾರತಕ್ಕೆ ಕೊಡುಗೆಯಾಗಲಿದೆ. ನಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ದೇಣಿಗೆ ನೀಡಿ ಜೊತೆಗೆ ಇತರರಿಗೂ ಸ್ಫೂರ್ತಿ ನೀಡುವಂತೆ ಮನವಿ ಮಾಡುತ್ತೇನೆ ಎಂದು ಮನವಿ ಮಾಡಿದ್ದಾರೆ.
