Breaking NewsLatestರಾಜ್ಯ
ಮೇಕೆದಾಟು ಯೋಜನೆ; ಶುಕ್ರವಾರ ಮೋದಿ ಜೊತೆ ಬಿಎಸ್ವೈ ಚರ್ಚೆ ಸಾಧ್ಯತೆ

ಬೆಂಗಳೂರು: ರಾಜ್ಯದ ಮೇಕೆದಾಟು ಯೋಜನೆ ವಿಚಾರವಾಗಿ ಪ್ರಬಲ ವಿರೋಧಕ್ಕೆ ತಮಿಳುನಾಡು ಸಜ್ಜಾಗಿರುವ ಬೆನ್ನಲ್ಲೇ ಶುಕ್ರವಾರ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರಧಾನಿ ಮೋದಿಯವರೊಡನೆ ಈ ವಿಚಾರವಾಗಿ ಚರ್ಚಿಸುವ ಸಾಧ್ಯತೆಯಿದೆ.
ಶುಕ್ರವಾರ ಬಿಎಸ್ವೈ ದೆಹಲಿಗೆ ತೆರಳಲಿದ್ದು, ಸಂಜೆ ಪ್ರಧಾನಿಯವರನ್ನು ಭೇಟಿ ಮಾಡಿ ಮೇಕೆದಾಟು ಪ್ರಾಜೆಕ್ಟ್ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರೊಂದಿಗೆ ಈ ಸಂಬಂಧ ಬಿಎಸ್ವೈ ಸಭೆ ನಡೆಸಿದ್ದರು.
ಶುಕ್ರವಾರದ ಬಿಎಸ್ವೈ ದೆಹಲಿ ಭೇಟಿಯ ಮುಖ್ಯ ಉದ್ದೇಶ ಸಂಪುಟ ವಿಸ್ತರಣೆ ಸಂಬಂಧ ಮೋದಿ ಮತ್ತು ನಡ್ಡಾ ಅವರೊಡನೆ ಚರ್ಚಿಸುವುದಾಗಿದೆ. ಈ ವೇಳೆ ಅವರು ಮೇಕೆದಾಟು ಯೋಜನೆಯ ಅಗತ್ಯವನ್ನೂ ಮೋದಿಯವರಿಗೆ ಮನವರಿಕೆ ಮಾಡಿಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
