Breaking NewsLatestರಾಷ್ಟ್ರೀಯಸುದ್ದಿ
ಇಂದು ಕೇದಾರನಾಥ, ಬದರಿನಾಥ ದೇವಾಲಯಗಳು ಬಂದ್

ಉತ್ತರಾಖಂಡ: ಇಂದು ವರ್ಷದ ಕೊನೆಯ ಹಾಗೂ ಭಾಗಶಃ ಸೂರ್ಯಗ್ರಹಣ. ಈ ಹಿನ್ನೆಲೆ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳು ಬಂದ್ ಇರಲಿವೆ.
ಗ್ರಹಣದ ನಂತರ ದೇವಾಲಯದ ಬಾಗಿಲು ತೆರೆಯಲಾಗುವುದು ಮತ್ತು ಪೂಜೆ ನೆರವೇರಿಸಲಾಗುವುದು ಎಂದು ಕೇದಾರನಾಥ-ಬದರಿನಾಥ ದೇವಾಲಯ ಸಮಿತಿಯ ಮುಖ್ಯ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಇಂದು ಸೂರ್ಯಗ್ರಹಣವಿರುವ ಹಿನ್ನೆಲೆ, ಅನೇಕ ದೇವಾಲಯಗಳ ಬಾಗಿಲು ಮುಚ್ಚಲಾಗುವುದು ಈ ವೇಳೆ ಭಕ್ತರಿಗೆ ದೇವಸ್ಥಾನಕ್ಕೆ ಅವಕಾಶವಿರುವುದಿಲ್ಲ.
