Breaking NewsLatestರಾಷ್ಟ್ರೀಯವಿದೇಶಸುದ್ದಿ

ಕಾಶ್ಮೀರಕ್ಕೆ ಸಂಬಂಧಿಸಿದಂತೆ ಜರ್ಮನಿಗೆ ಯಾವುದೇ ಹೊಸ ನಿಲುವು ಇಲ್ಲ: ಜರ್ಮನಿ

ನವದೆಹಲಿ: ಕಾಶ್ಮೀರ ವಿಚಾರದಲ್ಲಿ ತನ್ನ ನಿಲುವು ಬದಲಾಗಿಲ್ಲ. ದ್ವಿಪಕ್ಷೀಯ ಮಾತುಕತೆಯೇ ಈ ವಿವಾದಕ್ಕೆ ಪರಿಹಾರ ಎಂದು ಜರ್ಮನಿ ಭಾನುವಾರ ತಿಳಿಸಿದೆ.

ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಕಾಶ್ಮೀರ ವಿವಾದಕ್ಕೆ ಪರಿಹಾರಕ್ಕೆ ಕಂಡುಕೊಳ್ಳಲು ಜರ್ಮನಿ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರು ನೀಡಿದ್ದ ಆಹ್ವಾನವನ್ನು ಭಾರತ ನಿರಾಕರಿಸಿದ ಬೆನ್ನಲ್ಲೇ ಜರ್ಮನಿ ಈ ಹೇಳಿಕೆ ನೀಡಿದೆ.

‘ಕಾಶ್ಮೀರಕ್ಕೆ ಸಂಬಂಧಿಸಿದಂತೆ ಜರ್ಮನಿಗೆ ಯಾವುದೇ ಹೊಸ ನಿಲುವು ಇಲ್ಲ. ಈ ಹಿಂದಿನಂತೆ ಸ್ಥಿರವಾಗಿರಲಿದೆ’ ಎಂದು ಜರ್ಮನಿಯ ಭಾರತದ ರಾಯಭಾರಿ ಫಿಲಿಪ್ ಅಕರ್ಮನ್‌ ಪಿಟಿಐ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಅ.7ರಂದು ಉಭಯ ದೇಶಗಳ ವಿದೇಶಾಂಗ ಸಚಿವವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ, ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಕಾಶ್ಮೀರ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಮಾತನಾಡಿದ್ದರು.

Related Articles

Leave a Reply

Your email address will not be published. Required fields are marked *

Back to top button