ನಮ್ಮ ಸೇವೆಮೆಟ್ರೋ

ಬೆಂಗಳೂರಿನಲ್ಲಿ ನೆಲೆಯಿಲ್ಲದ 15 ಕುಟುಂಬಗಳಿಗೆ ಬಾಲಾಜಿ ಗ್ರೂಪ್​ನಿಂದ ದಿನಸಿ ವಿತರಣೆ

ಬೆಂಗಳೂರು: ಬಲೂನ್ ಸೇರಿದಂತೆ ವಿವಧ ಅಟಿಕೆ ವಸ್ತುಗಳನ್ನು ರಸ್ತೆಗಳಲ್ಲಿ ವ್ಯಾಪಾರ ಮಾಡುತ್ತಾ ವಿಜಯನಗರ ಟೋಲ್‌ಗೇಟ್‌ ಮೆಟ್ರೋ ಕೆಳಗೆ ಟೆಂಟ್‌ಗಳಲ್ಲಿ ಜೀವನ ಸಾಗಿಸುತ್ತಿದ್ದ 15 ಬಡ ಕುಟುಂಬಗಳಿಗೆ ಬಾಲಾಜಿ ಗ್ರೂಪ್ ವತಿಯಿಂದ ಇಂದು ಬೆಳಗ್ಗೆ ದಿನಸಿ ವಿತರಿಸಲಾಯಿತು.

ನಿನ್ನೆ ಪೋಲೀಸರು ಏಕಾಏಕಿ ಈ ಕುಟುಂಬಗಳನ್ನು ಎತ್ತಂಗಡಿ ಮಾಡಿದ್ದರು. ಈ ಬಡ ಕುಟುಂಬಗಳು ದಿಕ್ಕುಕಾಣದೇ ನೆಲೆಗಾಗಿ ಅಲೆಯುತ್ತಿದ್ದಾರೆ. ಹತ್ತಾರು ಮಕ್ಕಳನ್ನು ಕಟ್ಟಿಕೊಂಡು ಉಳಿದುಕೊಳ್ಳಲು ಜಾಗ ಹುಡುಕಾಡುತ್ತಿದ್ದಾರೆ.

ಬಾಲಾಜಿ ಗ್ರೂಪ್ ಈ ಕುಟುಂಬಗಳ ನೋವಿಗೆ ಸ್ಪಂದಿಸಿ ದಿನಸಿ ವಿತರಿಸಿ ನೆರವಾಗಿದೆ.

ಗ್ರೂಪ್​ನ ಮೀಡಿಯಾ ಸಲಹೆಗಾರ ಮತ್ತು 24×7 ಲೈವ್​ ಕನ್ನಡದ ಪ್ರಧಾನ ಸಂಪಾದಕ ಶಶಿಧರ್ ಭಟ್ ಅವರು ಈ ಕುಟುಂಬಗಳಿಗೆ ದಿನಸಿ ವಿತರಿಸಿದರು.

ಬಾಲಾಜಿ ಗ್ರೂಪ್ ಸಂಸ್ಥಾಪಕರು ಮತ್ತು ಆಡಳಿತ ಮಂಡಳಿ ಕೋವಿಡ್ ಸಂಕಷ್ಟದಲ್ಲಿರುವ ಎಲ್ಲರಿಗೂ ರಾಜ್ಯದ ವಿವಿಧೆಡೆ ನೆರವು ನೀಡುವುದರಲ್ಲಿ ತೊಡಗಿದೆ. ಈಗಾಗಲೇ ವಿವಿಧೆಡೆ ಬಡವರು, ಕೂಲಿ ಕಾರ್ಮಿಕರು ಎಚ್​ಐವಿ ಬಾಧಿತ ಮಕ್ಕಳಿಗೆ ನೆರವು ನೀಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button