Latestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಕುಡಿದ ನಶೆಯಲ್ಲಿ ಹೆಂಡತಿ ಮೂಗು ಕಚ್ಚಿ ಗಾಯಗೊಳಿಸಿದ ಗಂಡ

ಧಾರವಾಡ : ಕುಡಿದ ನಶೆಯಲ್ಲಿ ಪಾಪಿ ಪತಿಯೊಬ್ಬ ತನ್ನ ಹೆಂಡತಿ ಮೂಗು ಕಚ್ಚಿ ಜೊತೆಗೆ ಅತ್ತೆ ಕತ್ತು ಹಿಸುಕಿ ಹತ್ಯೆಗೆ ಯತ್ನಿಸಿದ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ಕಳೆದ ದಿನ ತಡರಾತ್ರಿ ನಡೆದಿದೆ. ಉಮೇಶ ಗಂಡಗುದರಿ ಹೆಂಡತಿ ಮತ್ತು ಅತ್ತೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯಾಗಿದ್ದಾನೆ.

ಕಳೆದ ಹಲವು ವರ್ಷಗಳಿಂದ ಉಮೇಶ ಪತ್ನಿ ಗೀತಾ ಗಂಡನ ಕುಡಿತದ ಚಟ ಹಾಗೂ ಕಿರಿಕಿರಿಯಿಂದ ಬೇಸತ್ತು ತವರು ಮನೆಯಲ್ಲಿ ವಾಸವಿದ್ದರು.ಕಳೆದ ದಿನ ಲಂಟ ಪೂರ್ತಿ ಕುಡಿದು ನಶೆಯಲ್ಲಿ ಹೆಂಡತಿ‌ಯ ತಾಯಿ ಮನೆಗೆ ಬಂದು, ಹೆಂಡತಿ ಗೀತಾಳ ಜೊತೆ ಜಗಳಕ್ಕೆ ಇಳಿದಿದ್ದಾನೆ ಇದನ್ನು ನೋಡಿ, ಜಗಳ ಬೀಡಿಸಲು ಅತ್ತೆ ನೀಲವ್ವಾ ಅವರು ಮುಂದಾಗಿದ್ದಾರೆ. ಆದರೆ ಪತಿ ಮಹಾಶಯ ಅಷ್ಟರಲ್ಲಿ ಹೆಂಡತಿ ಮೂಗು ಕಚ್ಚಿ ತೀವ್ರವಾಗಿ ಗಾಯಗೊಳಿಸಿದ್ದನಂತೆ. ಅಲ್ಲದೆ ಇದನ್ನು ತಡೆಯಲು ಬಂದ ಅತ್ತೆಯ ಕತ್ತಿ ಹಿಸುಕಿ ಗಾಯಮಾಡಿ, ಅಕ್ಕ ಪಕ್ಕದವರು ಬರುತ್ತಿದಂತೆ ಪತಿಮಾಹಾಯ ಸ್ಥಳದಿಂದ ಪರಾರಿಯಾಗಿದ್ದಾನೆ.

ಸ್ಥಳಿಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು, ಗಾಯಗೊಂಡ ಗೀತಾ ಹಾಗೂ ನೀಲವ್ವಾ ಅವರನ್ನು
ಆಸ್ಪತ್ರೆಗೆ ಕಳುಹಿಸಿ, ಪರಿಶೀಲನೆ ಕೈಗೊಂಡು ಕಿರಾತಕ ಪತಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.‌

Spread the love

Related Articles

Leave a Reply

Your email address will not be published. Required fields are marked *

Back to top button