Breaking NewsLatestಪರಿಹಾರಗಳುವಾಸ್ತು
ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಿಸಲು ಇಲ್ಲಿದೆ ಪರಿಹಾರ

ಪ್ರತಿಯೊಬ್ಬರಿಗೂ ಕೂಡ ಅವರ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸವನ್ನು ಮಾಡಬೇಕು. ಹಾಗೆ ಅವರು ತಮ್ಮ ಉತ್ತಮ ಜೀವನವನ್ನು ರೂಪಿಸಬೇಕು ಎಂಬ ಮಹತ್ವಾಕಾಂಕ್ಷೆ ಎಲ್ಲರಿಗೂ ಇರುತ್ತದೆ. ಅದಕ್ಕಾಗಿ ತಂದೆ-ತಾಯಿಗಳು ಕೂಡ ಬಹಳಷ್ಟು ಪರಿಶ್ರಮ ವಹಿಸುತ್ತಾರೆ. ಆದರೆ ಕೆಲವೊಮ್ಮೆ ಮಕ್ಕಳು ಅನಾವಶ್ಯಕ ಕಾರಣಗಳಿಂದಾಗಿ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ವಹಿಸಲು ಆಗುವುದಿಲ್ಲ. ಹೀಗಾಗಿ ಮಕ್ಕಳಿಗೆ ಓದಿನ ಬಗ್ಗೆ ಗಮನ ಹರಿಸಲು ಹೀಗೆ ಮಾಡಬೇಕು.
- ವಿದ್ಯಾರ್ಥಿಯ ಮನಸ್ಸು ವಿದ್ಯಾಧ್ಯಯನದಿಂದ ದೂರವಾಗುತ್ತಿದ್ದರೆ,ವಿದ್ಯಾರ್ಥಿ ಮಂಗಳವಾರದ ದಿನದಂದು ತಾಮ್ರದ ಉಂಗುರದಲ್ಲಿ ಹವಳವನ್ನು ಧರಿಸಬೇಕು.
- ಭಾನುವಾರದ ದಿನದಂದು ಅಭ್ಯಾಸದ ಕೋಣೆಯ ಈಶಾನ್ಯ ಕೋನದಲ್ಲಿ ಭಗವತಿ ಸರಸ್ವತಿಯ ಚಿತ್ರಪಟವನ್ನು ಸ್ಥಾಪಿಸಿ, ಧೂಪ-ದೀಪ ಬೆಳಗಿಸಿ ಅರ್ಚನೆ ಮಾಡಿ.
- ಮಂಗಳವಾರದಂದು ನವೀನ ಕೆಂಪು ವಸ್ರ್ತದಲ್ಲಿ ಸ್ವಲ್ಪ ಕೆಂಪು ಬೇಳೆಯನ್ನು ಗಂಟುಕಟ್ಟಿ ಪಾಠಿ ಚೀಲದಲ್ಲಿ ಇರಿಸುವುದರಿಂದ ಏಕಾಗ್ರತೆ ವೃದ್ಧಿಯಾಗುತ್ತದೆ.
