
ನಟ ದುನಿಯಾ ವಿಜಯ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.ಚಂದನವನದಲ್ಲಿ ದುನಿಯಾ ಸಿನಿಮಾದ ಮೂಲಕ ಸಖತ್ ಫೇಮಸ್ ಆಗಿದ್ದರು. ನಂತರ ಕಳೆದ ವರ್ಷ ಸಲಗ ಸಿನಿಮಾದಲ್ಲಿ ಅವರೆ ನಿರ್ದೇಶನ ಮಾಡಿ ನಟನೆಯೂ ಸಹ ಮಾಡಿದ್ದಾರೆ.
ಇದೀಗ ಇಂದು ಅವರ ಹುಟ್ಟುಹಬ್ಬದವಾಗಿದ್ದರಿಂದ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಈ ಬಾರಿಯೂ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಣಯ ಕೈಗೊಂಡಿದ್ದಾರೆ.ಈ ಕುರಿತು ವಿಜಯ್ ಅವರು ಪತ್ರ ಬರೆದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಸ್ಯಾಂಡಲ್ವುಡ್ನ ಖ್ಯಾತ ನಟ ಪುನೀತ್ ರಾಜ್ಕುಮಾರ್ ಮೃತಪಟ್ಟಿದ್ದಾರೆ. ಇದು ಇಡೀ ಚಿತ್ರರಂಗಕ್ಕೆ ನೋವು ತಂದಿದೆ. ದುನಿಯಾ ವಿಜಯ್ ಅವರಿಗೂ ಈ ವಿಚಾರ ದುಃಖ ನೀಡಿದೆ. ಕಳೆದ ವರ್ಷ ದುನಿಯಾ ವಿಜಯ್ ಅವರ ತಂದೆ, ತಾಯಿ ಇಬ್ಬರೂ ಮೃತಪಟ್ಟರು.
ಹೀಗಾಗಿ ಇಬ್ಬರನ್ನೂ ಒಂದೇ ವರ್ಷ ಕಳೆದುಕೊಂಡಿದ್ದು ಅವರಿಗೆ ಸಾಕಷ್ಟು ನೋವು ತಂದಿದೆ. ಈ ಮೂರು ಪ್ರಮುಖ ಕಾರಣಕ್ಕೆ ವಿಜಯ್ ಅವರು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.
ಸದ್ಯ ಬಾಲಯ್ಯ 107ನೇ ಚಿತ್ರಕ್ಕೆ ದುನಿಯಾ ವಿಜಯ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.



