Uncategorizedರಾಷ್ಟ್ರೀಯಸುದ್ದಿ

ಭಯೋತ್ಪಾದನಾ ನಿಧಿ ಪ್ರಕರಣ; ಜೆಕೆ ರಾಜ್ಯ ತನಿಖಾ ಸಂಸ್ಥೆ ದಾಳಿ

ಜಮ್ಮು ಕಾಶ್ಮೀರ: ಭಯೋತ್ಪಾದನಾ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ (SIA) ಭಾನುವಾರ ರಾಷ್ಟ್ರ ರಾಜಧಾನಿ, ಅದರ ನೆರೆಹೊರೆಯ ಹರಿಯಾಣ ಮತ್ತು ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ.

ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ಮಾಡಲು ಆದೇಶದೊಂದಿಗೆ ಇತ್ತೀಚಿಗೆ ರಚಿಸಲಾದ SIA ಯ ಪ್ರತ್ಯೇಕ ತಂಡಗಳು ಒಂದು ಹರಿಯಾಣದ ಫರೀದಾಬಾದ್​ ಮತ್ತು ಇನ್ನೊಂದು ಕಾಶ್ಮೀರದ ಅನಂತನಾಗ್ ಜಿಲ್ಲೆ ಸೇರಿದಂತೆ ದೆಹಲಿಯ 5 ಸ್ಥಳಗಳಲ್ಲಿ ಶೋಧ ನಡೆಸುತ್ತಿವೆ.

ಮೂಲಗಳ ಪ್ರಕಾರ, ಎಸ್​ಐಎ ದಾಳಿ ನಡೆಸಿರುವ ಸ್ಥಳಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿಗಳು ಮತ್ತು ಭಯೋತ್ಪಾದಕರ ಹವಾಲಾ ಅಥವಾ ಭಯೋತ್ಪಾದಕ ನಿಧಿಗೆ ಸೇರಿವೆ.   

Spread the love

Related Articles

Leave a Reply

Your email address will not be published. Required fields are marked *

Back to top button